ಪ್ರೇಮ ವಿವಾಹವಾಗಿದ್ದ ಪಿಎಸ್’ಐ ಮಗನನ್ನು ವಾಹನ ಹಾಯಿಸಿ ಹತ್ಯೆ: ಪೋಷಕರ ಆರೋಪ

ದಿಗಂತ ವರದಿ ವಿಜಯಪುರ:

ಬೈಕ್ ಮೇಲೆ ಹೋಗುತ್ತಿದ್ದ ಯುವಕನಿಗೆ ವಾಹನ ಹಾಯಿಸಿ ಹತ್ಯೆ ಮಾಡಿರುವ ಘಟನೆ ನಗರ ಹೊರ ವಲಯ ರೇಡಿಯೋ ಕೇಂದ್ರ ಬಳಿಯ ರಿಂಗ್ ರೋಡ್’ನಲ್ಲಿ ನಡೆದಿದೆ.

ಮೃತಪಟ್ಟವನನ್ನು ಮುಸ್ತಕಿಮ್ ಕೂಡಗಿ ಎಂದು ಗುರುತಿಸಲಾಗಿದೆ. ಮುಸ್ತಕಿಮ್ ಕೂಡಗಿ, ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣಾ ಪಿಎಸ್ಐ ಆರ್.ಬಿ. ಕೂಡಗಿ ಮಗನಾಗಿದ್ದು, ಈತ ಮಹಾನಗರ ಪಾಲಿಕೆ ಮಾಜಿ ಸದಸ್ಯ ರೌವೂಫ್‌ ಶೇಖನ ಮಗಳನ್ನು ಕಳೆದ 6 ತಿಂಗಳ ಹಿಂದೆ ಪ್ರೇಮವಿವಾಹವಾಗಿದ್ದ.

ಈ ಹತ್ಯೆಯ ಹಿಂದೆ ಮಾಜಿ ನಗರಸಭಾ ಸದಸ್ಯ ರೌವೂಫ್ ಶೇಖ ಹಾಗೂ ಕುಟುಂಬವಿದೆ ಎಂದು ಮೃತ ಯುವಕನ ತಂದೆ ಆರೋಪಿಸಿದ್ದಾರೆ‌. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!