ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸದಾ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಸ್ಪಂದಿಸುತ್ತಾ ಬ್ಯುಸಿಯಾಗಿರುತ್ತಿದ್ದ ಮಂಗಳೂರಿನ ಆರಕ್ಷಕ ಬಳಗ ಸೋಮವಾರ ತುಸು ನಿರಾಳವಾಗಿತ್ತು. ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರೊಂದಿಗೆ ಡಿಫರೆಂಟ್ ಕಾರ್ಯಕ್ರಮವೊಂದನ್ನು ಆಯೋಜಿಸಿ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಯಿತು.
ನಗರದ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪತ್ನಿ ಗೀತಾ ಶಿವರಾಜ್ ಕುಮಾರ್ ಸಮೇತರಾಗಿ ಪೊಲೀಸರು ಹಾಗೂ ಅವರ ಮನೆಮಂದಿಯೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಡಾ. ಶಿವರಾಜ್ಕುಮಾರ್ ಅವರು ತನ್ನದೇ ಸಿನೆಮಾಗಳ ಹಾಡಿಗೆ ಸಖತ್ ಹೆಜ್ಜೆ ಹಾಕುವ ಮೂಲಕ ರಂಜಿಸಿದರು.
ಸರಳ ಉಡುಗೆ ತೊಡುಗೆಯೊಂದಿಗೆ ಆಗಮಿಸಿದ್ದ ಶಿವರಾಜ್ ಕುಮಾರ್ ಎಂದಿನಂತೆ ತಮ್ಮ ಸರಳ ನಡೆನುಡಿಯ ಮೂಲಕ ಗಮನ ಸೆಳೆದರು. ಅಪ್ಪುವನ್ನು ನೆನಪಿಸುತ್ತಾ ಅಪ್ಪುಗಾಗಿ ಸಾಂಗ್ ಎಂದು ಹೇಳುತ್ತಾ, ಱಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ….ೞ ಹಾಡಿನ ಕೆಲ ಸಾಲುಗಳನ್ನು ಹಾರು. ಮಾತ್ರವಲ್ಲದೆ ವೇದಿಕೆಯಲ್ಲಿ ಟಗರು ಚಿತ್ರದ ಡಯಲಾಗ್ ಹೇಳಿದರಲ್ಲದೆ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಟಗರು ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.
ಗೀತಾ ಶಿವರಾಜ್ ಕುಮಾರ್, ಡಿಸಿಪಿ ಹರಿರಾಂ ಶಂಕರ್, ನಿರ್ಮಾಪಕರಾದ ಶ್ರೀಕಾಂತ್, ರಾಜೇಶ್ ಭಟ್ ಹಾಗೂ ಮೇಘರಾಜ್ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ಅಗಲಿದ ಪುನೀತ್ ರಾಜ್ಕುಮಾರ್ ಅವರನ್ನು ನೆನಿಪಿಸಿಕೊಳ್ಳಲಾಯಿತು.