ಬಿಜೆಪಿ ಆಡಳಿತ ಬಂದ ಮೇಲೆ ಭ್ರಷ್ಟಾಚಾರದ ರಾಜ್ಯವೆಂಬ ಬಿರುದು: ಖಗೆ೯ ಅರೋಪ

ಹೊಸದಿಗಂತ ವರದಿ,ಕಲಬುರಗಿ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನಾ೯ಟಕಕ್ಕೆ ಭ್ರಷ್ಟಾಚಾರದ ರಾಜ್ಯವೆಂಬ ಬಿರುದು ಸಿಕ್ಕಿದೆ. ಬಿಜೆಪಿ ಅಂದರೆ ಬ್ರೋಕರ್ ಜನತಾ ಪಕ್ಷ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿಧಾನಸೌಧವನ್ನು ಜಗತ್ತಿನ ಅತೀ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್ ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗಗಳನ್ನು ಖರೀದಿ ಮಾಡಬಹುದು. ರಾಜ್ಯದಲ್ಲಿ ಉತ್ತಮ ಸೇಲ್ಸ್ ಮೆನ್ ಗಳು ಇದ್ದಾರೆ. ಅಧಿಕಾರಿಗಳು, ಮಂತ್ರಿಗಳು, ಅನೇಕ ಶಾಸಕರೇ ಅದರ ಸೇಲ್ಸಮೆನ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಹೈಕಮಾಂಡ್ ಗೆ ಮದ್ಯವರ್ತಿಯಾಗಿದರೆ, ಸಿಎಂ ಗೆ ಸಚಿವರು, ಸಚಿವರಿಗೆ ಶಾಸಕರು, ಶಾಸಕರಿಗೆ ಅಧಿಕಾರಿಗಳು ಮದ್ಯವರ್ತಿ ಯಾಗಿದ್ದಾರೆ. ಇನ್ನು ಕೆಲ ಪ್ರಕರಣದಲ್ಲಿ ರೌಡಿ ಶೀಟ್ ರ್ ಗಳು ಕೂಡಾ ಮಧ್ಯವರ್ತಿಯಾಗಿದ್ದಾರೆ. ಈ ಸರ್ಕಾರವನ್ನು ಸಿಎಂ ನಡೆಸುತ್ತಿಲ್ಲಾ, ಆಡಳಿತದಲ್ಲಿ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿಗೆ ಹೋಮ್ ಮಿನಿಸ್ಟರ್ ಗಿಂತ ಹೆಚ್ಚಿನ ಮಾಹಿತಿ ಇದೆಯಂತೆ. ಅಧಿಕಾರಿಗಳ ವರ್ಗಾವಣೆ ಮಾಡಿಸೋದೆ ಆತನ ಸೋಶಿಯಲ್ ವರ್ಕ್ ಅಂತೆ, ಆತನ ಆಡಿಯೋ ಕೇಳಿದರೆ ಆತ ಸುಳ್ಳು ಹೇಳ್ತಿಲ್ಲಾ ಅಂತ ಅನ್ಸುತ್ತೆ ಎಂದ ಅವರು ಯಾರಿಗೆ ಒದ್ದು ಒಳಗೆ ಹಾಕಬೇಕಿತ್ತೋ ಅಂತವರಿಗೆ ಅಧಿಕಾರಿಗಳು ಕಾಲು ಬಿಳುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಜೈಲಲ್ಲಿರಬೇಕಾದವರು ಕುಮಾರಕೃಪಾದಲ್ಲಿದ್ದಾರೆ ಎಂದು ತಿವಿದರು.

ವಿಧಾನಸೌಧದಲ್ಲಿ ಪಿಡಬ್ಲೂಡಿ ಜೆಇ 10.5 ಲಕ್ಷ ಹಣ ಸಮೇತ ಸಿಕ್ಕಿಬಿದ್ದಿದ್ದಾನೆ. ಯಾರು ಈ ಹಣವನ್ನು ತಗೆದುಕೊಳ್ಳಲು ಕೂತಿದ್ದರು.
ಯಾರಿಗೆ ಹಣ ಕೊಡಲು ಹೋಗಿದ್ದರು ಅನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!