ಚುನಾವಣೆ ರಣಕಹಳೆ: ಕಾಶಿ ವಿಶ್ವನಾಥನ ದರುಶನ ಪಡೆದ ‘ನಮೋ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಆರಂಭಿಸಿರುವ ಕೇಸರಿ ಪಡೆ. ಈ ಸಂದರ್ಭದಲ್ಲಿ, ಕೇಸರಿ ಬ್ರಿಗೇಡ್​ನ ರಾಜ್ಯ ಸಂಚಾರಕ್ಕೂ ಸಹ ಚಾಲನೆ ಸಿಕ್ಕಿದೆ. ಅದರಲ್ಲೂ ಪ್ರಧಾನಿ ಮೋದಿಯವರು ಅಭಿವೃದ್ಧಿ ಮಂತ್ರದ ಮೂಲಕ ಹಲವು ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಇದೀಗ ಮೋದಿಯವರು ಕಾಶಿ ವಿಶ್ವನಾಥನ ದರುಶನ ಪಡೆದಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ಈಶಾನ್ಯ ಭಾರತದ ನಾಲ್ಕು ರಾಜ್ಯಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಸಂಜೆ ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಆಗಮಿಸಿದರು. ವಾರಣಾಸಿಯಲ್ಲಿ ನಮೋ ಬರೋಬ್ಬರಿ 28 ಕಿ.ಮೀ ರೋಡ್ ಶೋ ನಲ್ಲಿ ಪಾಲ್ಗೊಂಡು ಜನರತ್ತ ಕೈಬೀಸಿದರು.

ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಅವರ ಪ್ರೀತಿಯ ನಾಯಕನಿಗೆ ಶುಭಾಶಯ ಕೋರಲು ಜನಸಾಗರವೇ ಹರಿದು ಬಂದಿತ್ತು. ಮೋದಿಯವರನ್ನು ಪುಷ್ಪವೃಷ್ಟಿ ಮಾಡುವ ಮೂಲಕ ಗೌರವಪೂರ್ವಕವಾಗಿ ಸ್ವಾಗತಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!