ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 50 ವರ್ಷಗಳಿಂದ ವಿಶ್ವವಿಖ್ಯಾತ ತಿರುಪತಿ ಲಡ್ಡುಗಳನ್ನು ತಯಾರಿಸಲು ನಮ್ಮ ನಂದಿನಿ ತುಪ್ಪವನ್ನು ಬಳಸಲಾಗುತ್ತಿತ್ತು, ಆದರೆ ಬೆಲೆ ಏರಿಕೆ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ಮಂಡಳಿ ತುಪ್ಪ ಖರೀದಿಗೆ ಒಪ್ಪಿಗೆ ನೀಡಿಲ್ಲ. ಹಾಗಾಗಿ ಇನ್ಮುಂದೆ ತಿರುಪತಿ ಲಡ್ಡುವಿನಲ್ಲಿ ನಂದಿನಿ ತುಪ್ಪದ ಘಮಲು ಸಿಗುವುದಿಲ್ಲ.
ಈ ಬಗ್ಗೆ ಸಿ.ಟಿ. ರವಿ ಮಾತನಾಡಿದ್ದು, ಕಾಂಗ್ರೆಸ್ ಸರ್ಕಾರ ಬಂದಮೇಲೆ ಏನೆಲ್ಲಾ ಸಮಸ್ಯೆಯಾಗುತ್ತಿದೆ. ಏಕಾಏಕಿ ದರ ಹೆಚ್ಚಳ ಮಾಡಿದ್ದು, ಇದೀಗ ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಇರುವುದಿಲ್ಲ. ಕಾಂಗ್ರೆಸ್ ಹಳೆಯ ದರಕ್ಕೆ ತುಪ್ಪ ಪೂರೈಕೆಗೆ ಒಪ್ಪಿಲ್ಲ. ಕಾಂಗ್ರೆಸ್ ತನ್ನ ಕೆಟ್ಟ ಅಜೆಂಡಾಗಳಿಗಾಗಿ ಸುವರ್ಣ ಕರ್ನಾಟಕವನ್ನು ನಾಶ ಮಾಡಲು ಹೊರಟಿದೆ ಎಂದಿದ್ದಾರೆ.
ಕೆಎಂಎಫ್ ಸಲ್ಲಿಸಿದ್ದ ತುಪ್ಪದ ದರ ಪ್ರಸ್ತಾವನೆಯನ್ನು ಟಿಟಿಡಿ ಒಪ್ಪಿಲ್ಲ. ಹಾಗಾಗಿ ಟೆಂಡರ್ನಿಂದ ಕೆಎಂಎಫ್ ದೂರ ಉಳಿದಿದೆ. ಆರು ತಿಂಗಳಿಗೆ ಬರೋಬ್ಬರಿ 14 ಲಕ್ಷ ಕೆಜಿ ತುಪ್ಪ ಸರಬರಾಜು ಇದೀಗ ಸ್ಥಗಿತವಾಗಿದೆ.