ಹೊಸದಿಗಂತ ವರದಿ ಉಡುಪಿ:
ದೇಶಾದ್ಯಂತ ಎನ್ ಐ ಎ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಪಿ ಎಫ್ ಐ ಮುಖಂಡನಿಗೆ ಉಡುಪಿಯಲ್ಲಿ ಗುರುವಾರ ಪೋಲಿಸರು ಹುಡುಕಾಟ ನಡೆಸಿದ ಘಟನೆ ನಡೆದಿದೆ.
ಜಿಲ್ಲೆಯ ಹಿರಿಯಡ್ಕ ಠಾಣಾ ವ್ಯಾಪ್ತಿ ಮತ್ತು ಕಾಪು ಠಾಣಾ ವ್ಯಾಪ್ತಿಯಲ್ಲಿ ತಲೆಮರಿಸಿಕೊಂಡಿರುವ ಮಾಹಿತಿಯ ಆಧಾರದಲ್ಲಿ ಪೋಲಿಸರಿಂದ ಹುಡುಕಾಟ ನಡೆಸಿದ್ದಾರೆ.
ಪಿ.ಎಫ್ ಐ ಮುಖಂಡನ ಮೊಬೈಲ್ ಲೋಕೆಶನ್ ಆಧಾರದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ಪೋಲಿಸ್ ಉನ್ನತ ಮೂಲಗಳು ತಿಳಿಸಿದ್ದು, ಪಿ.ಎಫ್.ಐ ಮುಖಂಡ ಹೊರ ಜಿಲ್ಲೆಯವನೇ ಅಥವಾ ಉಡುಪಿ ಜಿಲ್ಲೆಯವರಾ ಎಂಬುದರ ಬಗ್ಗೆ ಪೋಲಿಸರು ಗೌಪ್ಯತೆ ಕಾಪಾಡಿಕೊಂಡಿದ್ದಾರೆ.