ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಮಿಂಚಿನ ದಾಳಿ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ತಂಡ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಸಾಮೆತ್ತಡ್ಕ ಎಂಬಲ್ಲಿಗೂ ದಾಳಿ ನಡೆಸಿದ್ದು, ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಎನ್ಐಎ ಟೀಮ್ಗೆ ದಾಳಿಯ ಸಂದರ್ಭ ಪುತ್ತೂರು ಪೊಲೀಸರು ಸಾಥ್ ನೀಡಿದ್ದರು. ಗುರುವಾರ ಮುಂಜಾನೆ ದಿಢೀರ್ ದಾಳಿ ನಡೆಸಿದ ತಂಡಗಳು ಅಬ್ದುಲ್ ಖಾದರ್ ಅವರ ಸಾಮೆತ್ತಡ್ಕ ಮನೆಯಿಂದಲೇ ಅವರನ್ನು ವಶಕ್ಕೆ ಪಡೆದಿದೆ. ಈ ದಾಳಿಯನ್ನು ಖಂಡಿಸಿ ಪುತ್ತೂರಿನ ದರ್ಬೆಯಲ್ಲಿ ಪಿಎಫ್ಐ ವತಿಯಿಂದ ಪ್ರತಿಭಟನೆ ನಡೆಯಿತು.