ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿಗೂ ಎನ್ಐಎ ತಂಡ ದಾಳಿ ನಡೆಸಿದೆ. ಇಲ್ಲಿನ ನಿವಾಸಿ ಮಹಮ್ಮದ್ ಶರೀಫ್ ಮನೆಗೆ ಗುರುವಾರ ನಸುಕಿನ ವೇಳೆ ಭೇಟಿ ನೀಡಿದ ತಂಡ ಮಾಹಿತಿ ಕಲೆಹಾಕಿದೆ.
ದಾಳಿಯ ಸಂದರ್ಭ ಮಹಮ್ಮದ್ ಶರೀಫ್ ಮನೆಯಲ್ಲಿ ಇರಲಿಲ್ಲ. ಎನ್ಐಎ ಶರೀಫ್ ಮನೆಯಲ್ಲಿ ಶೋಧ ನಡೆಸಿದೆ. ಇನ್ನು ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಎಸ್ಡಿಪಿಐ ಮತ್ತು ಪಿಎಫ್ ಐಗೆ ಸೇರಿದ ಕೆಲವರು ಎನ್ಐಎ ದಾಳಿ ಖಂಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.