ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದಕ ಪ್ರಕರಣಗಳಿಗೆ ಸಂಬಂದಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ ಮತ್ತು ದೆಹಲಿ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ದಾಳಿ ನಡೆಸಿದ್ದು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಹಾಗು ಭಯೋತ್ಪಾದಕ ಸಂಬಂಧಗಳು ಜಾಡನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ವರದಿ ಮಾಡಿವೆ.
ಪಟಿಯಾಲಾ ಜೈಲು ಬ್ರೇಕ್ ಮತ್ತು ಮೊಹಾಲಿ ಪೊಲೀಸ್ ಗುಪ್ತಚರ ವಿಭಾಗದ ಪ್ರಧಾನ ಕಚೇರಿಯಲ್ಲಿ ಆರ್ಪಿಜಿ ದಾಳಿಯ ನಂತರ ಎನ್ಐಎ ಸೇರಿದಂತೆ ಇತರ ಗುಪ್ತಚರ ಏಜೆನ್ಸಿಗಳು ಕಳೆದ ಎಂಟು ತಿಂಗಳಿಂದ ದರೋಡೆಕೋರ-ಭಯೋತ್ಪಾದಕ ಸಂಬಂಧವನ್ನು ಮುರಿಯಲು ಕೆಲಸ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಪೊಲೀಸರೊಂದಿಗೆ ಎನ್ಐಎ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಗ್ಯಾಂಗ್ಸ್ಟರ್ ವೀರೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಕಲಾ ರಾಣಾ ಅವರ ಯಮುನಾನಗರ ನಿವಾಸದಿಂದ ಆರು ಅಕ್ರಮ ಶಸ್ತ್ರಾಸ್ತ್ರಗಳು, 90 ಲೈವ್ ಕಾರ್ಟ್ರಿಡ್ಜ್ಗಳು ಮತ್ತು 10 ಮೊಬೈಲ್ ಫೋನ್ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಸಿದ್ದು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್, ಗೋಲ್ಡಿ ಬ್ರಾರ್ ಅವರ ಮುಕ್ತಸರ ನಿವಾಸದಲ್ಲೂ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಲಾಗಿದ್ದು ಎನ್ಐಎ ತಂಡವು ದರೋಡೆಕೋರನ ನಿವಾಸದಿಂದ ಒಂದು ಮೊಬೈಲ್ ಸಿಮ್ ಕಾರ್ಡ್ ಅನ್ನು ವಶಪಡಿಸಿಕೊಂಡಿದೆ.
ದರೋಡೆಕೋರ ಗೌರವ್ ಪಾಟಿಯಲ್ ಅಲಿಯಾಸ್ ಲಕ್ಕಿ ಅವರ ನಿವಾಸದಿಂದ ಎನ್ಐಎ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಅದೇ ರೀತಿ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಜಗ್ಗು ಭಗವಾನ್ಪುರಿಯ ಬಟಾಲಾ, ಗುರುದಾಸ್ಪುರ ನಿವಾಸದಿಂದ ಎರಡು ಮೊಬೈಲ್ ಫೋನ್ ಸೆಟ್ಗಳು ಮತ್ತು ಕೆಲವು ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.