ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಯುವಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ತನಿಖೆ ಎನ್ಐಎಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ತನಿಖೆ ಸಂದರ್ಭ ಎಸ್ಡಿಪಿಐ ಕಾರ್ಯಕರ್ತರು ಬಂಧನ ಆದ ಬೆನ್ನಲ್ಲೇ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕೇಂದ್ರ ಗೃಹ ಇಲಾಖೆಯ ಅಧಿನದ ಎನ್ ಐ ಎ ಶೀಘ್ರದಲ್ಲಿ ಬೆಳ್ಳಾರೆಗೆ ಬಂದು ತನಿಖೆ ನಡೆಸಲಿದೆ. ತನಿಖೆ ಎನ್ಐಎಗೆ ಒಪ್ಪಿಸಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗೃಹ ಸಚಿವರಿಗೆ ಪತ್ರ ಬರೆದಿದ್ದರು.
ಈಗಾಗಲೇ ರಾಜ್ಯದ ಹತ್ತಾರು ಪ್ರಕರಣಗಳು ಎನ್ಐಎ ತನಿಖಾ ಹಂತದಲ್ಲಿ ಇದೆ ಎಂದು ತಿಳಿದುಬಂದಿದೆ.