ರಾಜ್ಯದ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು: ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಮಹಮದ್ ಶಫಿ

ಹೊಸದಿಗಂತ ವರದಿ, ತುಮಕೂರು:

ಕರ್ನಾಟಕ ರಾಜ್ಯ ಸೌಹಾರ್ದತೆ ಮತ್ತೊಂದು ಹೆಸರು ಅಂತಹ ಸೌಹಾರ್ದತೆಗೆ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಮಹಮದ್ ಶಫಿ ಆಜಾದಿ
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಅವರು ಸಿದ್ದಗಂಗಾ ಶ್ರೀಗಳೊಂದಿಗೆ ಸುದೀರ್ಘವಾಗಿ ಹಿಜಾಬ್ ಹಾಗೂ ಕೇಸರಿ ಶಾಲಿನ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಕರ್ನಾಟಕದ ಸೌಹಾರ್ದತೆಗೆ ತುಮಕೂರಿನ ಸಿದ್ದಗಂಗಾ ಮಠ ಪ್ರಸಿದ್ಧ. ಪ್ರಥಮಬಾರಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೇನೆ ಎಂದರು.
ಇನ್ನು ಹಿಜಾಬ್ ವಿಚಾರವಾಗಿ ಸೌಹಾರ್ದತೆಗೆ ಮತೀಯ ಘರ್ಷಣೆಗೆ ಎಡೆಮಾಡಿಕೊಟ್ಟಿರುವ ಸಂದರ್ಭದಲ್ಲಿ ನಾವಿದ್ದು ಮುಸ್ಲಿಂ ಧಾರ್ಮಿಕ ನಾಯಕರೆಲ್ಲ ಹಲವಾರು ವಿಚಾರವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದರು.
ಸಹೋದರ ಧರ್ಮೀಯ ಸ್ವಾಮೀಜಿಯವರೊಂದಿಗೆ ಇಂದಿನ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಮುಂಚೆ ನಮ್ಮ ಕರ್ನಾಟಕ ಯಾವ ರೀತಿಯ ಸೌಹಾರ್ದಯುತವಾಗಿ ಇತ್ತು ಅದೇ ರೀತಿಯಲ್ಲಿ ಮುಂದುವರಿಯಬೇಕು ಅದಕ್ಕೆ ಧಕ್ಕೆ ಬರಬಾರದು ಸೌಹಾರ್ದ ಹಾಗೂ ಸಾಮರಸ್ಯವನ್ನು ಹಾಳುಮಾಡುವ ವ್ಯಕ್ತಿಗಳನ್ನು ನಾವೆಲ್ಲರೂ ಸೇರಿ ಮಟ್ಟಹಾಕಬೇಕಿದೆ ಎಂದರು.
ಕರ್ನಾಟಕ ಕರ್ನಾಟಕವಾಗಿಯೇ ಉಳಿಯಬೇಕು ಹಿಜಾಬ್ ವಿಚಾರ ಬಂದಾಗಿನಿಂದಲೂ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದು ಕೋಮುಗಲಭೆಗೆ ತಿರುಗುವ ವಾತಾವರಣ ನಿರ್ಮಾಣವಾಗುತ್ತಿದೆ.
ಹೀಗಾಗಿ ಸಿದ್ದಗಂಗಾ ಶ್ರೀಗಳ ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದ್ದೇನೆ ಸ್ವಾಮೀಜಿಯವರು ಯಾವ ಹಂತದಲ್ಲೂ ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಸಮಸ್ಯೆಯಾಗದಂತೆ ಹೋಗಬೇಕು .ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು ತೀರ್ಪು ಬರಲಿ ಅಂತ ಸಿದ್ದಗಂಗಾ ಶ್ರೀಗಳು ಹೇಳಿದ್ದಾರೆ ಎಂದರು.
ಹಿಜಾಬ್ ವಿಚಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು .ಯಾರು ಮಾಡಿದ್ದಾರೆ ಗೊತ್ತಿಲ್ಲ. ಭಾರತದಲ್ಲಿ ಸಂವಿಧಾನಬದ್ಧವಾಗಿ ಅವರ ಧರ್ಮ ಪಾಲಿಸುವ ಸಂವಿಧಾನ ಇದೆ .ಶರಿಯತ್ ಗೆ ಅದು ಕೂಡ ತುಂಬಾ ಅಗತ್ಯ. ಕರ್ನಾಟಕದ ಮುಸ್ಲಿಂ ಜನರು ಆತಂಕದಲ್ಲಿದ್ದಾರೆ .
ಹೀಗಾಗಿ ಇದನ್ನು ಸೌಹಾರ್ದಯುತವಾಗಿ ಮುಗಿಸಬೇಕು ಯಾವತ್ತೂ ಧರ್ಮ ಹಾಗೂ ಸಂವಿಧಾನದ ವಿಚಾರವಾಗಿ ಟುಗ್ ಆಫ್ ವಾರ್ ಆಗಿಲ್ಲ. ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ ಸುಗಮವಾಗಿ ಹೋಗಿದೆ . ಕೋರ್ಟ್ ತೀರ್ಪಿಗೆ ನಾವು ಗೌರವ ಕೊಡಬೇಕು.
ತೀರ್ಪು ಏನು ಬರುತ್ತೆ ನೋಡಬೇಕು, ಶಿರವಸ್ತ್ರ ಎಂಬುದು ಸಮವಸ್ತ್ರ ಅಲ್ಲ ಷರತ್ತಿಗೆ ಒಳಪಟ್ಟು ಹುಡುಗಿಯು ಹೊರಗಡೆ ಹೋಗುವಾಗ ಶಿರವಸ್ತ್ರ ಧರಿಸಿ ಹೋಗಬೇಕು ಅನ್ನೋ .
ಹೀಗಾಗಿ ಮುಂದೆ ಏನು ಮಾಡಬೇಕು ಅಂತ ಕಾನೂನು ತಜ್ಞರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದ ಅವರು
ಕೋರ್ಟ್ ತೀರ್ಪು ಸೌಹಾರ್ದಯುತವಾಗಿ ಬರುವ ನಿರೀಕ್ಷೆ ಇದೆ ಯಾರೇ ಆಗಲಿ ಸೌಹಾರ್ದತೆಗೆ ದಕ್ಕೆ ಉಂಟು ಮಾಡಿದರೆ ನಾವು ಒಪ್ಪಲ್ಲ . ಕೇಸರಿ ಶಾಲು ಹಿಂದೂಧರ್ಮದಲ್ಲಿ ಇದ್ದರೆ ಯಾರೂ ವಿರೋಧ ಮಾಡೋಕೆ ಆಗಲ್ಲ.
ಕೇಸರಿ ಶಾಲನ್ನು ಯಾರೂ ವಿರೋಧಿಸಿಲ್ಲ ಹಿಜಾಬ್ ಹಾಕುವುದು ಶರಿಯತ್ ನಲ್ಲಿ ಇದೆ ಹೀಗಾಗಿ ಅವಕಾಶ ಬೇಕು ಎಂದರು.
ಭಾರತದ ಉಸಾಬರಿ ಅವರಿಗೆ ಬೇಕಿಲ್ಲ.ಇಲ್ಲಿನ ಸಮಸ್ಯೆ ಗಳನ್ನು ಪರಿಹರಿಸಿಕೊಳ್ಳು ಶಕ್ತಿ ನಮಗಿದೆ.ಅವರು ಅವರ ದೇಶದ ಬಗ್ಗೆ ಕಾಳಜಿ ವಹಿಸಲಿ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ಅವರು ಎಚ್ಚರಿಕೆ ನೀಡಿದರು.
ನಮ್ಮ ಸಮುದಾಯದಲ್ಲಿ ಕೆಲ ಕಿಡಿಗೇಡಿಗಳು ಇದ್ದಾರೆ.ಕೆಲ ಕಿಡಿಗೇಡಿಗಳು ಕೆಟ್ಟ ಕೆಲಸ ಮಾಡಿದ್ದಾರೆ ಅಂತ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತರಬಾರದು ಎಂದರು.
ಇನ್ನು ಉಡುಪಿಯಲ್ಲಿ ಮುಗಿಸಬೇಕಾದ ವಿಚಾರ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿದೆ ಈ ಬಗ್ಗೆ ಯಾರು ಮಾಡಿದರು ಅನ್ನೋ ಸಂಶಯ ನಮಗೂ ಇದೆ.
ಒಂದು ಚಿಕ್ಕ ಸಮಸ್ಯೆ ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಈ ಬಗ್ಗೆ ನಮಗೂ ಸಹ ಆತಂಕ ಇದ್ದು .
ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿದವರ ಬಗ್ಗೆ ಸರ್ಕಾರ ಕ್ರಮ ವಹಿಸಲಿದೆ ಎಂದ ಅವರು.ಕೆಲವು ಎಲೆಕ್ಟ್ರಾನಿಕ್ಸ್ ಮಾಧ್ಯಮಗಳು ಸಣ್ಣದನ್ನು ದೊಡ್ಡದು ಮಾಡುವ ಕೆಲಸ ಮಾಡುತ್ತಿವೆ.ಅವರೂ ರಾಷ್ಟ್ರದ ಸೌಹಾರ್ದತೆಯ ಬಗ್ಗೆ ಚಿಂತಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!