ಹೊಸದಿಗಂತ ವರದಿ,ಚಿಕ್ಕಮಗಳೂರು:
ಯೂಸ್ ಅಂಡ್ ಥ್ರೋ ರಾಜಕೀಯವನ್ನು ಕೇಜ್ರಿವಾಲ್ಗಿಂತ ಚೆನ್ನಾಗಿ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ದಿವಂಗತ ಪರಿಕ್ಕರ್ ಅವರ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡದಿರುವ ಕಾರಣಕ್ಕೆ ಅರವಿಂದ ಕೇಜ್ರಿವಾಲ್ ಅವರು ಯೂಸ್ ಅಂಡ್ ಥ್ರೋ ಎನ್ನುವ ಮಾತನ್ನಾಡಿದ್ದಾರೆ. ಪರಿಕ್ಕರ್ ಅವರು ಬದುಕಿದ್ದಾಗ ಅವರ ಆರೋಗ್ಯ ಸರಿಯಾಗಿಲ್ಲದಿರುವಾಗ ಅವರನ್ನು ಅಪಮಾನಿಸಿ ಹೇಳಿಕೆ ಕೊಟ್ಟವರು ಇದೇ ಆಮ್ ಆದ್ಮಿ ಪಕ್ಷದವರು ಎಂದರು.
ಈಗ ಬಹುಷಃ ಯೂಸ್ ಅಂಡ್ ಥ್ರೋ ಪದದ ಅರ್ಥ ಅವರ ಪಕ್ಷದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರನ್ನ ನೋಡಿದಾಗ ಅರಿವಿಗೆ ಬಂದಿರಬೇಕು. ಅವರಿಗೆ ಅಧಿಕಾರ ಇಲ್ಲದಾಗ ಅವರೊಂದಿಗೆ ಯಾರೆಲ್ಲಾ ಇದ್ದರು, ಈಗ ಯಾರ್ಯಾರಿದ್ದಾರೆ ಎನ್ನುವುದನ್ನು ಗಮನಿಸಿದರೆ ಯೂಸ್ ಅಂಡ್ ಥ್ರೋ ಮಾಡುವವರು ಯಾರು ಎನ್ನುವುದು ಗೊತ್ತಾಗುತ್ತದೆ ಮೂದಲಿಸಿದರು.