ಹೊಸ ದಿಗಂತ ವರದಿ, ಜೋಯಿಡಾ:
ತಾಲೂಕಿನ ವಿರ್ನೋಲಿ ವಲಯದ ಗವೆಗಾಳಿಯಲ್ಲಿ ಯುವಕನ ಮೇಲೆ ಕರಡಿ ದಾಳಿ ಮಾಡಿದೆ. ಹೆಚ್ಚಿನ ಚಿಕತ್ಸೆಗೆ ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಗವೆಗಾಳಿ ಗ್ರಾಮದ ಕೃಷ್ಣಾ ದೇವಿದಾಸ ಕುಸಾಲಕರ 24 ವರ್ಷ ಇತನ ಮೇಲೆ ಗುರುವಾರ ಮಧ್ಯಾಹ್ನ ಕರಡಿದಾಳಿ ಮಾಡಿದೆ. ಎಡ ಕಾಲಿಗೆ ಬಲವಾದ ಗಾಯವಾಗಿದೆ. ಪ್ರಥಮ ಚಿಕತ್ಸೆಗಾಗಿ ದಾಂಡೇಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.
ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವುದರಿಂದ ಧಾರವಾಡ ದವಾಖಾನೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.