Sunday, December 10, 2023

Latest Posts

ಆಪರೇಷನ್‌ ಅಜಯ್:‌ ಇಸ್ರೇಲ್‌ನಿಂದ ರಾಷ್ಟ್ರ ರಾಜಧಾನಿ ತಲುಪಿದ ಮೂರನೇ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಪರೇಷನ್ ಅಜಯ್‌ನ ಭಾಗವಾಗಿ ಇಸ್ರೇಲ್‌ನಿಂದ 197 ಭಾರತೀಯರನ್ನು ಹೊತ್ತ ಮೂರನೇ ವಿಮಾನ ಭಾನುವಾರ ದೆಹಲಿಗೆ ಬಂದಿಳಿದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಕೌಶಲ್ ಕಿಶೋರ್ ಇಸ್ರೇಲ್‌ನಿಂದ ವಾಪಸಾದವರಿಗೆ ರಾಷ್ಟ್ರ ಧ್ವಜವನ್ನಿತ್ತು  ಆತ್ಮೀಯವಾಗು ಸ್ವಾಗತಿಸಿದರು.

ಇಸ್ರೇಲ್‌ನಿಂದ ತಮ್ಮನ್ನು ಸ್ಥಳಾಂತರಿಸಿದ್ದಕ್ಕಾಗಿ ಪ್ರಯಾಣಿಕರು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ʻಭಾರತ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಅಲ್ಲಿ ನಮಗೆ ಭಯವಾಯಿತು. ಕ್ರಮ ಕೈಗೊಂಡಿದ್ದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದರು. ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿಮಾನದಲ್ಲಿದ್ದ 197 ಭಾರತೀಯರು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಎಂದು ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಇಸ್ರೇಲ್‌ನಿಂದ ಮೊದಲ ಚಾರ್ಟರ್ ಫ್ಲೈಟ್ ಗುರುವಾರ 212 ಜನರನ್ನು ಕರೆತಂದಿದೆ. ಎರಡನೇ ಬ್ಯಾಚ್‌ನಲ್ಲಿ 235 ಭಾರತೀಯರು ಮರಳಿದರು. ಇದುವರೆಗೆ ಒಟ್ಟು 918 ಭಾರತೀಯರು ಇಸ್ರೇಲ್‌ನಿಂದ ಸ್ವದೇಶಕ್ಕೆ ಮರಳಿದ್ದಾರೆ. ಇನ್ನೂ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ಭಾರತಕ್ಕೆ ವಾಪಸಾಗಲು ಬಯಸುವವರು ಲಗತ್ತಿಸಲಾದ ಪ್ರಯಾಣದ ನಮೂನೆಯನ್ನು ತುರ್ತು ವಿಷಯವಾಗಿ ಪೂರ್ಣಗೊಳಿಸಬೇಕು ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ. ಭಾರತೀಯ ರಾಯಭಾರ ಕಚೇರಿಯು ಆಪರೇಷನ್ ಅಜಯ್‌ನಲ್ಲಿ ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಪ್ರಯಾಣದ ಸ್ಲಾಟ್‌ಗಳನ್ನು ನೀಡುತ್ತಿದೆ.

ಇಸ್ರೇಲ್‌ನಿಂದ ಹಿಂದಿರುಗಿದ ಭಾರತೀಯರ ವೆಚ್ಚವನ್ನು ಸರ್ಕಾರ ಭರಿಸುತ್ತಿದೆ. 18,000 ಭಾರತೀಯ ನಾಗರಿಕರು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ವಿದ್ಯಾರ್ಥಿಗಳು, ಐಟಿ ವೃತ್ತಿಪರರು ಮತ್ತು ವಜ್ರದ ವ್ಯಾಪಾರಿಗಳು ಇದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!