ಆಪರೇಷನ್ ಕಾವೇರಿ: ಸುಡಾನ್​ನಿಂದ ಬೆಂಗಳೂರಿಗೆ ಬಂದಿಳಿದರು 362 ಕನ್ನಡಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಫ್ರಿಕಾದ ಸೂಡಾನ್ (Sudan)ನಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಭಾರತದ ಸೇನಾ (Indian Army) ವಿಮಾನದಲ್ಲಿ ಏರ್ ಲಿಫ್ಟ್ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಯಿತು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರೆಲ್ಲರ ಸ್ಕ್ರೀನಿಂಗ್ ಮಾಡಿ, ವಿಳಾಸಗಳನ್ನು ಬರೆದುಕೊಂಡು ಕಳಿಸಲಾಗುತ್ತಿದೆ.
ಈ ಪೈಕಿ 56 ಜನ ತಮಿಳಿಗರಿದ್ದಾರೆ. ಸದ್ಯ ಸ್ಕ್ರೀನಿಂಗ್​, ಕೊವಿಡ್ ಟೆಸ್ಟ್​ ಮಾಡಿ ವಿಳಾಸ ಪಡೆಯಲಾಗಿದೆ. ಸುರಕ್ಷಿತವಾಗಿ ಸುಡಾನ್​ನಿಂದ ಕರೆತಂದಿರುವ ಕನ್ನಡಿಗರನ್ನು ಸ್ವಾಗತಿಸಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.

ಸ್ವಗ್ರಾಮಗಳಿಗೆ ತೆರಳಲು ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಏರ್ಪೋಟ್​ನಿಂದ ಅವರು ತಮ್ಮ ಊರುಗಳಿಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!