ಹೊಸದಿಗಂತ ವರದಿ,ಕಲಬುರಗಿ:
ಪ್ರಜಾಪ್ರಭುತ್ವದಲ್ಲಿ ಹಿಜಾಬ್ ಧರಿಸುವುದು ನಮ್ಮ ಹಕ್ಕು. ಹೀಗಾಗಿ ಯಾರು ಹಿಜಾಬ್,ನ್ನು ವಿರೋಧಿಸುವವರೋ,ಅವರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದಂತೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ರ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ ಹೇಳಿದರು.
ಹಿಜಾಬ್ ಬೆಂಬಲಿಸಿ ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.
ಬಿಜೆಪಿ ಪಕ್ಷವು ಹಿಜಾಬ್, ನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ.ಹಿಂದೂ-ಮುಸ್ಲಿಂ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು, ಮತಗಳನ್ನು ಒಡೆದು ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದರು.
ಹಿಜಾಬ್ ಬೇಕಾದರೆ ಪಾಕಿಸ್ತಾನ-ತಾಲಿಬಾನ್, ಗೆ ಹೋಗಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ನಲ್ಲಿ ತಾಲಿಬಾನ್, ಗೆ ಹಣ ನೀಡಿದ್ದು ಇದೇ ಬಿಜೆಪಿ ಸಕಾ೯ರ. ಪ್ರೋಟೋಕಾಲ್ ಮುರಿದು ಪಾಕಿಸ್ತಾನ ಕ್ಕೆ ಹೋಗಿ ಬಿರಿಯಾನಿ ತಿಂದಿದ್ದು ಇದೇ ದೇಶದ ಪ್ರಧಾನಿಯವರು ಎಂದು ವಾಗ್ದಾಳಿ ನಡೆಸಿದರು.
ಹಿಜಾಬ್ ನಮ್ಮ ಹಕ್ಕು. ಇದನ್ನು ವಿರೋಧಿಸಿದರೇ, ನಾವು ಸುಮ್ಮನೆ ಇರುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಹೇಳಿದರು.