ಹೊಸದಿಗಂತ ವರದಿ, ವಿಜಯಪುರ
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ ನೆಟ್ಟಾರು ಬರ್ಬರ ಹತ್ಯೆ ಖಂಡಿಸಿ, ನಗರ ಸೇರಿದಂತೆ ಜಿಲ್ಲೆಯ ಬಿಜೆಪಿ ವಿವಿಧ ವಿಭಾಗದ ಯುವ ಮುಖಂಡರು ರಾಜಿನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು, ವಿವಿಧ ಪ್ರಕೋಷ್ಠ ಹಾಗೂ ಇತರೆ ವಿಭಾಗದ ಯುವ ಮುಖಂಡರು ಸೇರಿ 30 ಕ್ಕೂ ಹೆಚ್ಚು ಜನರು ರಾಜಿನಾಮೆ ನೀಡಿದ್ದು, ಪ್ರವೀಣ ನೆಟ್ಟಾರು ಹತ್ಯೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಕಗ್ಗೊಲೆಯಿಂದ ಬಿಜೆಪಿ ಯುವ ಮುಖಂಡರು ಆಕ್ರೋಶಗೊಂಡಿರುವುದು ಸಹಜ. ಆದರೆ ಪ್ರವೀಣ ಹತ್ಯೆಯ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಕಠಿಣ ಹಾಗೂ ದಿಟ್ಟ ಕ್ರಮ ಕೈಗೊಳ್ಳುತ್ತದೆ.
ಈ ಬಗ್ಗೆ ಯಾರೂ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಜಿಲ್ಲಾ ಬಿಜೆಪಿ ವಿವಿಧ ವಿಭಾಗಕ್ಕೆ ರಾಜಿನಾಮೆ ಸಲ್ಲಿಸಿರುವ ಯುವ ಮುಖಂಡರು ರಾಜಿನಾಮೆ ಹಿಂಪಡೆಯಲು ಮನಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ