ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತಕ್ಕೆ ಉಗ್ರರನ್ನು ಕಳುಹಿಸಿ ದಾಳಿ ನಡೆಸಲು ಪಾಕಿಸ್ತಾನ ಸಂಚು ರೂಪಿಸಿದೆ. ನಿನ್ನೆ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನ ಕಮಲ್ಕೋಟ್ನಲ್ಲಿರುವ ಮಡಿಯನ್ ನಾನಕ್ ಪೋಸ್ಟ್ನಲ್ಲಿ ನಿನ್ನೆ ಮೂವರು ಉಗ್ರರು ನುಸುಳಲು ಯತ್ನಿಸಿದ್ದರು. ಈ ದೃಶ್ಯವನ್ನು ಭಾರತೀಯ ಸೇನೆ ಎಲೆಕ್ಟ್ರಾನಿಕ್ ಕಣ್ಗಾವಲು ಉಪಕರಣಗಳ ಮೂಲಕ ಪತ್ತೆ ಮಾಡಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಮೂವರು ಉಗ್ರರು ಉರಿ ಮೂಲಕ ನುಸುಳಲು ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಮೂವರು ಭಯೋತ್ಪಾದಕರ ಚಲನವಲನ ಪತ್ತೆಯಾದ ತಕ್ಷಣ ಭಾರತೀಯ ಸೇನೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನೂ ಹತ್ಯೆ ಮಾಡಿದೆ. ಈ ವಿವರಗಳನ್ನು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿಕೆಯಲ್ಲಿ ನೀಡಿದ್ದಾರೆ. ಭಯೋತ್ಪಾದಕರು ಮತ್ತೆ ಭಾರತದೊಳಗೆ ನುಸುಳಲು ಪ್ರಯತ್ನಿಸುವ ಸಾಧ್ಯತೆಯಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಈಗಾಗಲೇ ಸೇನೆಗೆ ತಿಳಿಸಿವೆ. ಭಾರತೀಯ ಭದ್ರತಾ ಪಡೆಗಳು ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳನ್ನು ಪದೇ ಪದೇ ವಿಫಲಗೊಳಿಸುತ್ತಿವೆ. ಭಯೋತ್ಪಾದಕರ ಚಲನವಲನಗಳನ್ನು ಪತ್ತೆಹಚ್ಚಲು ಭಾರತೀಯ ಸೇನೆಗೆ ಎಲೆಕ್ಟ್ರಾನಿಕ್ ಕಣ್ಗಾವಲು ಉಪಕರಣಗಳು ತುಂಬಾ ಉಪಯುಕ್ತವಾಗಿವೆ.
#WATCH | Pakistani terrorists were trying to infiltrate into India from Uri sector on Aug 25. The terrorists were detected by electronic surveillance gadgets after specific intelligence inputs were received. 3 terrorists were eliminated by alert Army troops: Indian Army officials pic.twitter.com/ObsQ4eXQy5
— ANI (@ANI) August 26, 2022