ಪಂತ್ ಕೆನ್ನೆಗೆ ಬಾರಿಸಬೇಕು, ಕಪಿಲ್ ದೇವ್ ಹೀಗೆ ಹೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಷಭ್ ಪಂತ್ ಇಲ್ಲದ ಟೀಂ ಇಂಡಿಯಾ ಬಗ್ಗೆ ಮಾತನಾಡಿದ ಮಾಜಿ ನಾಯಕ ಕಪಿಲ್ ದೇವ್ ಪಂತ್ ಮತ್ತೆ ಬರಲಿ ಅವರ ಕೆನ್ನೆಗೆ ಎರಡು ಬಾರಿಸ್ತೇನೆ ಎಂದು ಹೇಳಿದ್ದಾರೆ.

ರಿಷಭ್ ಇಲ್ಲದ ತಂಡ ಜಾಳಾಗಿ ಕಾಣುತ್ತಿದೆ, ತಪ್ಪು ಮಾಡಿದಾಗ ಪೋಷಕರು ಮಕ್ಕಳಿಗೆ ನಾಲ್ಕು ಏಟು ಕೊಡುವಂತೆ, ನಾನು ರಿಷಭ್‌ಗೆ ಬಾರಿಸುತ್ತೇನೆ ಎಂದಿದ್ದಾರೆ.

ರಿಷಭ್ ನನಗೆ ತುಂಬಾ ಇಷ್ಟ, ಆತ ಬೇಗ ಗುಣಮುಖನಾಗಲಿ, ನಿನ್ನನ್ನು ನೀನು ಸರಿಯಾಗಿ ನೋಡಿಕೊಂಡಿಲ್ವಲ್ಲಾ ಎಂದು ಕೆನ್ನೆಗೆ ಬಾರಿಸ್ತೇನೆ, ಈಗಿನ ಯುವಕರು ಯಾಕೆ ಹೀಗೆಲ್ಲಾ ಮಾಡಿಕೊಳ್ತಾರೋ ಅರ್ಥವಾಗ್ತಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!