ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಕ್ರಿಕೆಟಿಗ ರಿಷಭ್ ಪಂತ್ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ಗೆ ಕಳುಹಿಸಲಾಗುತ್ತಿದೆ.
ರಿಷಭ್ಗೆ ಮಂಡಿ ಶಸ್ತ್ರಚಿಕಿತ್ಸೆ ಅವಶ್ಯಕತೆ ಇದ್ದು, ಬಿಸಿಸಿಐ ಲಂಡನ್ಗೆ ಕಳುಹಿಸುವ ಸಾಧ್ಯತೆ ಇದೆ. ಶಸ್ತ್ರಚಿಕಿತ್ಸೆ ನಂತರ ಬರೋಬ್ಬರಿ ಒಂಬತ್ತು ತಿಂಗಳುಗಳ ರೆಸ್ಟ್ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.
ಭೀಕರ ರಸ್ತೆ ಅಪಘಾತದಲ್ಲಿ ಪಂತ್ ದೇಹಕ್ಕೆ ಅನೇಕ ಗಾಯಗಳಾಗಿವೆ. ಮೊಣಕಾಲು ಇಂಜುರಿ ಗಂಭೀರವಾಗಿದೆ.ನಿನ್ನೆಯಷ್ಟೇ ಏರ್ ಆಂಬುಲೆನ್ಸ್ ಮೂಲಕ ಪಂತ್ರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.