ದಿಗಂತ ವರದಿ ಕಲಬುರಗಿ:
ಯಾರು ಪಕ್ಷ ಬಿಡುವ ಬಗ್ಗೆ ಮಾತನ್ನು ಹೇಳಿದ್ದಾರೆಯೋ,ಅವರಿಗೆ ಬೂಸ್ಟರ ಡೋಸ್ ಬೇಕಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖಗೆ೯ ಪರೋಕ್ಷವಾಗಿ ಸಿಎಂ ಇಬ್ರಾಹಿಂ, ಗೆ ತಿರುಗೇಟು ನೀಡಿದ್ದಾರೆ.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ಗೆ ಕೊರೋನಾ ಬಂದಿದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ದೇಶದ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್ ವ್ಯಾಕ್ಸಿನವಿದ್ದಂತೆ. ಬಿಜೆಪಿ ಎನ್ನುವ ವೈರಸ್, ಗೆ ಒಂದೆ ಒಂದು ವ್ಯಾಕ್ಸಿನ ಅದು ಕಾಂಗ್ರೆಸ್ ಪಕ್ಷ ಎಂದರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ದೆಶದ ಎಲ್ಲಾ ಸಮಸ್ಯೆಗೆ ಪರಿಹಾರ ಸಾಧ್ಯ. ಬಡತನಕ್ಕೆ, ರೈತರಿಗೆ, ಕಾಮಿ೯ಕರಿಗೆ,ಮಹಿಳಾ ಸುರಕ್ಷತೆಗೆ ನಮ್ಮದೆ ವ್ಯಾಕ್ಸಿನ ಬೇಕು ಎಂದರು.
ಸಿಎಂ ಇಬ್ರಾಹಿಂ ಹೇಳಿಕೆ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಯಾರು ಎಲ್ಲಿಗೆ ಹೋಗಲಿ,ಪಕ್ಷವೆನೂ ಕುಸಿದು ಬಿಳುತ್ತಾ ಎಂದು ಪ್ರಶ್ನಿಸಿದ ಅವರು,ಜೆಡಿಎಸ್ ಜೊತೆಗೆ ಹೋಗಲು ಸಿದ್ದರಿದ್ದರೆ, ಅದು ಅವರಿಗೆ ಬಿಟ್ಟ ವಿಚಾರ ಎಂದರು.