ಸತ್ತ ಮೂರು ದಿನಗಳ ಬಳಿಕ ವಾಪಸ್‌ ಬರ್ತೇನೆ: ಗನ್ನವರಂನಲ್ಲಿ ಪಾದ್ರಿಯ ವಿಚಿತ್ರ ವರ್ತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯೇಸು ಕ್ರಿಸ್ತ ಸತ್ತ ಮೂರು ದಿನ ಬಳಿಕ ಸಮಾಧಿಯಿಂದ ಎದ್ದು ಬಂದ ಎಂದು ಬೈಬಲ್ ಹೇಳುತ್ತದೆ. ಇದೇ ರೀತಿ ನಾನು ಕೂಡ ಸತ್ತು ಮೂರು ದಿನಗಳ ಬಳಿಕ ಎದ್ದು ಬರುತ್ತೇನೆ ಎಂದು ಒಬ್ಬ ಪಾದ್ರಿ ಚಿತ್ರ ವಿಚಿತ್ರವಾಗಿ ಆಡುತ್ತಿರುವ ಘಟನೆ ಕೃಷ್ಣಾ ಜಿಲ್ಲೆ ಗನ್ನವರಂ ಮಂಡಲದ ಗೊಲ್ಲನಪಲ್ಲಿಯಲ್ಲಿ ನಡೆದಿದೆ. ಆತ ಸಾಯಲು ಸಮಾಧಿಯನ್ನೂ ನಿರ್ಮಾಣ ಮಾಡಿದ್ದಾನೆ. ಅಷ್ಟೆ ಅಲ್ಲದೆ ಊರಿನಲ್ಲೆಲ್ಲ ಪೋಸ್ಟರ್ ಗಳನ್ನು ಅಂಟಿಸಿ ಪ್ರಚಾರ ಮಾಡಿದ್ದಾನೆ.

ನಾಗಭೂಷಣಂ ಎಂಬ ವ್ಯಕ್ತಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದು, ತನ್ನದೇ ಆದ ಚರ್ಚ್ ಕೂಡ ಇದೆ. ಇತ್ತೀಚಿಗೆ ತಾನು ಸಮಾಧಿ ಮಾಡಿ ಏಸುಕ್ರಿಸ್ತನಂತೆ ಬದುಕಿ ಬರುತ್ತೇನೆ ಎಂಬಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಇದರಿಂದ ಅವರ ಕುಟುಂಬ ಸದಸ್ಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದೇವರು ನನ್ನೊಂದಿಗೆ ಮಾತನಾಡುತ್ತಿದ್ದಾನೆ ಮತ್ತು ಅವನು ಸ್ವರ್ಗಕ್ಕೆ ಕರೆಯುತ್ತಿರುವುದಾಗಿ ಹೇಳುತ್ತಿದ್ದಾನೆ.

ತಮ್ಮ ಚರ್ಚ್‌ನೊಳಗೆ ಸಮಾಧಿ ನಿರ್ಮಿಸಿದ್ದನ್ನು ಕಂಡ ಕುಟುಂಬ ಸದಸ್ಯರು ಹಾಗೂ ಸ್ಥಳೀಯ ಜನರು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಾಗಭೂಷಣ್ ಅವರಿಗೆ ಕೌನ್ಸಿಲಿಂಗ್ ಕೂಡಾ ಮಾಡಿದ್ದಾರೆ. ಆದರೂ ದೇವರಿಗೆ ಕೊಟ್ಟ ಮಾತನ್ನು ಬಿಡುವುದಿಲ್ಲ ಸಮಾಧಿಯಲ್ಲಿ ಸತ್ತು ಬದುಕಿ ಬರುತ್ತೇನೆ ಅಂತಿದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!