ಹಾಡಹಗಲೇ ಮನೆಯೊಳಗೆ ನುಗ್ಗಲೆತ್ನಿಸಿದವ ಅಂದರ್

ದಿಗಂತ ವರದಿ ಮಡಿಕೇರಿ:

ಹಾಡಹಗಲೇ ಒಂಟಿ ಮನೆಯ ಕಾಂಪೌಂಡ್ ಹಾರಿ ಅಕ್ರಮವಾಗಿ ಮನೆಯೊಳಗೆ ನುಗ್ಗಲು ಯತ್ನಿಸಿದ ಆರೋಪಿಯೊಬ್ಬನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ‌ ಘಟನೆ‌ ಗೋಣಿಕೊಪ್ಪದಲ್ಲಿ ನಡೆದಿದೆ.
ಬಂಧಿತನನ್ನು ಮೂಲತಃ ಬೆಂಗಳೂರಿನ ನಿವಾಸಿ ಅರುಣ್ ಎಂದು ಗುರುತಿಸಲಾಗಿದೆ.

ಈತ ಕೊಡಗಿನ ತಿತಿಮತಿ ಸಮೀಪದ ಕರಡಿಕೊಪ್ಪ ಗ್ರಾಮದಿಂದ ಮದುವೆಯಾಗಿರುವ ಈತ ಟಿ. ಶೆಟ್ಟಿಗೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆನ್ನಲಾಗಿದ್ದು, ಭಾನುವಾರ ಮಧ್ಯಾಹ್ನ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ವಿನೋದ್ ಎಂಬವರ ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು‌ ಮಾತ್ರ ಇದ್ದ ಸಂದರ್ಭ ಕಾಪೌಂಡ್ ಹಾರಿ ಬಂದಿದ್ದಾನೆ. ನಂತರ ಮನೆಯ ಒಳಗೆ ಬಲವಂತವಾಗಿ ನುಗ್ಗುಲು ಯತ್ನಿಸಿದ್ದಾನೆ. ಮಹಿಳೆ ಸಾಹಸದಿಂದ ಬಾಗಿಲು ಮುಚ್ಚಿ ಪೊಲೀಸರಿಗೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಈ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!