ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯಲ್ಲಿ ಐತಿಹಾಸಿಕ ‘ಬೆಂಗಳೂರು ಕಡಲೆಕಾಯಿ ಪರಿಷೆ’ ಶುರುವಾಗಿದೆ. ಮೂರು ದಿನಗಳಿಂದ ನಡೆಯುತ್ತಿರುವ ಈ ಪರಿಷೆಯಿಂದಾಗಿ ಬಸವನಗುಡಿಯಲ್ಲಿ ಗತಕಾಲದ ವೈಭವ ಮತ್ತೆ ಮರುಕಳಿಸಿದೆ. ಐದು ದಿನಗಳ ಕಾಲ ಸಂಭ್ರಮ ಮೇಳೈಸಲಿದೆ. ಪರಿಷೆಗೆ ಆಗಮಿಸುವವರಿಗಾಗಿ ಸೂಕ್ತ ಪೆಂಡಾಲ್ ವ್ಯವಸ್ಥೆ, ಆಸನಗಳ ವ್ಯವಸ್ಥೆ, ಗಣ್ಯ ವ್ಯಕ್ತಿಗಳಿಗೆ, ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಷೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲಿ ನೋಡಿದರೂ ಕಡಲೆಕಾತಿ, ವಿವಿಧ ತಿಂಡಿ-ತಿನಿಸು. ಬಣ್ಣ ಬಣ್ಣದ ಆಟಿಕೆ, ಹೆಂಗಳೆಯರ ಆಭರಣ, ಹೀಗೆ ನೂರಾರು ಬಗೆಯ ವಸ್ತುಗಳು ಪರಿಷೆಯಲ್ಲಿ ಮನಸೂರೆಗೊಳಿಸುತ್ತಿವೆ. ಪರಿಷೆಯ ಕೆಲ ಫೋಟೋಗಳು ಇಲ್ಲಿವೆ.