ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಾಜ್ಯೋತ್ಸವದ ಪ್ರಯುಕ್ತವಾಗಿ ಏರ್ಪಡಿಸಿದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವು ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿ ಜರುಗಿದೆ. ಈ ಐತಿಹಾಸಿಕ ಅಭಿಯಾನದ ಒಂದು ಝಲಕ್ ಇಲ್ಲಿದೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕೋಟಿ ಕಂಠ ಗಾಯನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
“ಕೋಟಿ ಕಂಠ ಗಾಯನ” ವಿಶೇಷ ಕಾರ್ಯಕ್ರಮವನ್ನು ಧಾರವಾಡದಲ್ಲಿ ಏರ್ಪಡಿಸಲಾಗಿದ್ದು, ಸಾವಿರಾರು ಯುವ ಕನ್ನಡಿಗ ಮಿತ್ರರೊಂದಿಗೆ ಸಂಸದ ಪ್ರಲ್ಹಾದ್ ಜೋಶಿ ಭಾಗಿ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದ ಕೋಟಿ ಕಂಠ ಗಾಯನದಲ್ಲಿ ಸಿಎಂ ಬೊಮ್ಮಾಯಿ. ಆರ್.ಅಶೋಕ್ ಭಾಗಿ
ಮೈಸೂರಿನ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಕೋಟಿ ಕಂಠ ಗಾಯನದಲ್ಲಿ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ಭಾಗವಹಿಸಿ ತಾಯಿ ಭುವನೇಶ್ವರಿಯ ಪಾದಾರವಿಂದಗಳಿಗೆ ಗಾಯನ ನಮನವನ್ನು ಸಲ್ಲಿಸಿದರು.
ನಳಿನ್ ಕುಮಾರ್ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕೋಟಿ ಕಂಠ ಗಾಯನ
ಕೋಟಿ ಕಂಠ ಗಾಯನಕ್ಕೆ ದನಿಗೂಡಿಸಿದ ಮೈಸೂರು ಕಾರಾಗೃಹದ ಕೈದಿಗಳು
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮ ಗಿನ್ನಿಸ್ ದಾಖಲೆಯತ್ತ ಸಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಗಿನ್ನಿಸ್ ಪ್ರಶಸ್ತಿ ಸಮಿತಿಯ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿ ವೀಕ್ಷಣೆ ನಡೆಸಿದರು.
ಜಿಲ್ಲಾಡಳಿತ ಹಾಗೂ ವಿವಿಧ ಸಂಘಸಂಸ್ಥೆಗಳು, ಶಾಲಾ ಕಾಲೇಜುಗಳ ಸಹಯೋಗದಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆ ಕೋಟಿ ಕಂಠ ಗಾಯನ ಕಾರ್ಯಕ್ರಮ
ಸಮುದ್ರ ಹಾಗೂ ಬಾನಿನಲ್ಲೂ ಮೊಳಗಿದ ಕೋಟಿ ಕಂಠ ಗಾಯನದ ವಿಡಿಯೋ.
ಸಮುದ್ರದ ಭೋರ್ಗರೆವ ಅಲೆಗಳ ನಡುವೆ ಮೊಳಗಿದ #ಕೋಟಿ_ಕಂಠ_ಗಾಯನ. ಕಾಯಕದ ನಡುವೆ ಕನ್ನಡದ ಹಾಡುಗಳು.#ನನ್ನ_ನಾಡು_ನನ್ನ_ಹಾಡು. pic.twitter.com/oz1jJC6i9b
— Sunil Kumar Karkala (@karkalasunil) October 28, 2022
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು. @flyspicejet #ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡು pic.twitter.com/iaV7DTPVi8
— Sunil Kumar Karkala (@karkalasunil) October 28, 2022