ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಕೆಂಪು ಗ್ರಾನೈಟ್ ವಾಕ್ವೇ, ಸುತ್ತಲೂ ಹಸಿರು, ನವೀಕರಿಸಿದ ಕಾಲುವೆಗಳು, ರಾಜ್ಯವಾರು ಆಹಾರ ಮಳಿಗೆಗಳು, ಸೌಕರ್ಯ ತಾಣಗಳು ಸೇರಿದಂತೆ ಹೊಸ ಬಗೆಯ ವೈವಿಧ್ಯಮಯ ನೋಟದ ಕರ್ತವ್ಯ ಪಥವನ್ನು ಉದ್ಘಾಟಿಸಿದರು. ಇದರ ಜೊತೆಗೆ ಇಂಡಿಯಾ ಗೇಟ್ನಲ್ಲಿ ಹೆಮ್ಮೆಯ ಕನ್ನಡಿಗನ ಕೈಯಲ್ಲಿ ಅರಳಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಮದುವಣಗಿತ್ತಿಯಂತೆ ಅಲಂಕಾರಗೊಂಡ ಕರ್ತವ್ಯಪಥ ಉದ್ಘಾಟನಾ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ.
ನೇತಾಜಿ ಸುಭಾಶ್ ಚಂದ್ರ ಬೋಸ್ ಪ್ರತಿಮೆ ಅನಾವರಣ
ಕರ್ತವ್ಯಪಥ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು
ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಆತ್ಮೀಯ ಸಂವಾದ
ವಿದ್ಯಾರ್ಥಿಗಳೊಡಗೂಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆ