ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಭೂಕಂಪನಕ್ಕೆ ತತ್ತರಿಸುವ ದಕ್ಷಿಣ ಟರ್ಕಿ ಮತ್ತು ಸಿರಿಯಾಗೆ ಅನೇಕ ದೇಶಗಳು ನೆರವಿನ ಹಸ್ತ ಚಾಚಿದ್ದು, ಭಾರತವು ‘ಆಪರೇಷನ್ ದೋಸ್ತ್‘ (Operation Dost) ಅಡಿಯಲ್ಲಿ ಟರ್ಕಿಗೆ ಪಾರುಗಾಣಿಕಾ ತಂಡಗಳನ್ನು ಕಳುಹಿಸುತ್ತಿದೆ. ಇದುವರೆಗೂ ಆರು ವಿಮಾನಗಳು ಟರ್ಕಿಗೆ ತೆರಳಿದ್ದು, ಮತ್ತಷ್ಟು ರಕ್ಷಣಾ ಸಲಕರಣೆಗಳನ್ನೊತ್ತು ಹಾರಲು ಇನ್ನೊಂದು ವಿಮಾನ ಸಜ್ಜಾಗಿದೆ.
ಆಪರೇಷನ್ ದೋಸ್ತ್ ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಭಾರತವು ಔಷಧಗಳು, ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ಭಾಋತದ ರಕ್ಷಣಾ ತಂಡಗಳು ಹೊರ ತೆಗೆಯಲಾಗುತ್ತಿದೆ.
ಹಟಾಯ್ನಲ್ಲಿರುವ ಈ ಕ್ಷೇತ್ರ ಆಸ್ಪತ್ರೆಯು ಭೂಕಂಪದಿಂದ ಹಾನಿಗೊಳಗಾದವರಿಗೆ ಚಿಕಿತ್ಸೆ ನೀಡುತ್ತದೆ. ನಮ್ಮ ವೈದ್ಯಕೀಯ ಮತ್ತು ಕ್ರಿಟಿಕಲ್ ಕೇರ್ ತಜ್ಞರು ಮತ್ತು ಸಲಕರಣೆಗಳ ತಂಡವು ತುರ್ತು ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ತಯಾರಿ ನಡೆಸುತ್ತಿದೆ.
ಹುಡುಕಾಟ ಮತ್ತು ರಕ್ಷಣಾ ಪ್ರಯತ್ನಗಳನ್ನು ಹೆಚ್ಚಿಸಲು ಟರ್ಕಿಯಲ್ಲಿರುವ ಭಾರತದ ಎನ್ಡಿಆರ್ಎಫ್ ತಂಡ
ಗಾಜಿಯಾಂಟೆಪ್ನಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿರುವ ಭಾರತೀಯ ಸೇನೆ
30 ಹಾಸಿಗೆಗಳ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು ಕ್ರಿಟಿಕಲ್ ಕೇರ್ ತಜ್ಞರು ಮತ್ತು ಶಸ್ತ್ರಚಿಕಿತ್ಸಕರು ಸೇರಿದಂತೆ 45 ಸದಸ್ಯರ ವೈದ್ಯಕೀಯ ತಂಡದೊಂದಿಗೆ C17. ಎಕ್ಸ್-ರೇ ಯಂತ್ರ, ವೆಂಟಿಲೇಟರ್ಗಳು, ಓಟಿ ಮತ್ತು ಇತರ ಉಪಕರಣಗಳನ್ನು ಕಳಿಸಿದ ಭಾರತ