ಹೊಸ ದಿಗಂತ ವರದಿ, ಕಲಬುರಗಿ:
ಜನವರಿ 25ರಂದು ಬಬಲಾದ-ಸಾವಳಗಿ ರೈಲ್ವೆ ಹಳಿ ಮೇಲೆ ಪೋಟೋಗ್ರಾಫರ ಶಿವಕುಮಾರ್ (25) ಹತ್ಯೆ ಮಾಡಿ ಶವ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೋಲಿಸರು ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾಂತೇಶ (21), ಬಸವರಾಜ (24),ಫಕಿರಪ್ಪಾ ಸಲಗಾರ (25), ಸಿದ್ದಾರೂಡ ಕೋರವಾರ (26), ಅಶೋಕ್ ಜಮಾದಾರ (26) ಸೇರಿದಂತೆ ಐವರ ಬಂಧನ ಮಾಡಲಾಗಿದೆ.
ಆರೋಪಿ ಮಹಾಂತೇಶ ತಾಯಿ ಜೊತೆ ಕೊಲೆಯಾದ ಶಿವಕುಮಾರ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪವಿದ್ದ ಹಿನ್ನೆಲೆಯಲ್ಲಿ ಸೋದರಮಾವ ಬಸವರಾಜ ಸಹಾಯ ಪಡೆದು ಶಿವಕುಮಾರ್ ಹತ್ಯೆ ಮಾಡಲಾಗಿತ್ತು.
ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ,ಪ್ರಕರಣ ಮುಚ್ಚಿ ಹಾಕಲು ಶವವನ್ನು ರೈಲ್ವೆ ಹಳಿ ಮೇಲೆ ಬಿಸಾಕಿದ್ದರು.
ಈ ಕುರಿತು ವಾಡಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .