ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಮೊದಲ ಹಂತದ ವಿಸ್ತರಣೆಯಾದ ಮಹಾಕಾಲ್ ಲೋಕ ಕಾರಿಡಾರ್ ಅನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. ಮಹಾಕಾಳೇಶ್ವರ ದೇವಸ್ಥಾನದ ದಾರಿಯುದ್ದಕ್ಕೂ 600 ಮೀಟರ್ ಉದ್ದದ ಹರಿ ಫಾಟಕ್ ಸೇತುವೆಯ ರೇಲಿಂಗ್ಗಳಲ್ಲಿ ಎಣ್ಣೆ ದೀಪಗಳನ್ನು ಉರಿಸಲಾಗಿದ್ದು, ದೀಪದಲ್ಲಿ ಬೆಳಕಿನಲ್ಲಿ ಮಹಾಕಾಳನ ದೇವಾಲಯ ದೀಪಾವಳಿಯ ಮೆರುಗೇ ತುಂಬಿತ್ತು.
ಈ ಕಾರಿಡಾರ್ ಮಾರ್ಗದುದ್ದಕ್ಕೂ ಹಲವಾರು ಕಲಾವಿದರು ತಮ್ಮ ಕಲೆಗಳನ್ನು ಪ್ರದರ್ಶಿಸಿದರು. ಜೊತೆಗೆ ಖ್ಯಾತ ಗಾಯಕ ಕೈಲಾಶ್ ಖೇರ್ ‘ಜೈ ಶ್ರೀ ಮಹಾಕಾಲ’ ಎಂಬ ಸ್ತುತಿ ಹಾಡಿದರು.