ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಕಟ್ಟಿದ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ʻಪ್ರಗತಿಯ ಪ್ರತಿಮೆʼ ಇಂದು ಪ್ರಧಾನಿ ಮೋದಿ ಕೈಯಿಂದ ಅನಾವರಣಗೊಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾಪರ್ಣೆಗೊಂಡಿದೆ. ಅನಾವರಣಕ್ಕೂ ಮುನ್ನವೇ ‘ವಿಶ್ವ ಬುಕ್ ಆಫ್ ರೆಕಾರ್ಡ್ಸ್’ ಸೇರಿದ ಈ ಕಂಚಿನ ಪ್ರತಿಮೆಯನ್ನು ಬೆಂಗಳೂರು ನಗರದ ಬೆಳವಣಿಗೆಗೆ ಕಾರಣರಾದ ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ನಿರ್ಮಿಸಲಾಗಿದೆ. ಪ್ರತಿಮೆಯನ್ನು ಖ್ಯಾತ ಶಿಲ್ಪಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ರಾಮ್ ವಾಂಜಿ ಸುತಾರ್ ವಿನ್ಯಾಸಗೊಳಿಸಿದ್ದಾರೆ
ಈ ಸಂದರ್ಭದರಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮೆಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಪ್ರಧಾನಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
#WATCH | Prime Minister Narendra Modi unveils 'Statue of Prosperity', the 108-feet bronze statue of Nadaprabhu Kempegowda, in Bengaluru
(Source: DD) pic.twitter.com/75WLwM4MrY
— ANI (@ANI) November 11, 2022
ಕಂಚಿನ ಪ್ರತಿಮೆಯ ವಿಶೇಷತೆ
- ಕಂಚಿನ ಪ್ರತಿಮೆಯ ತೂಕ ಬರೋಬ್ಬರಿ 220ಟನ್. ಅದರಲ್ಲಿ ಕಂಚು 98 ಕೆಜಿ, ಅಡಿಪಾಯಕ್ಕಾಗಿ ಬಳಸಲಾದ ಕಬ್ಬಿಣ 120 ಟನ್.
- 18 ಅಡಿ ವಿಸ್ತಾರವಾದ ಕಟ್ಟೆಯನ್ನು ಪ್ರತಿಮೆಯ ಅಡಿಯಲ್ಲಿ ನಿರ್ಮಾಣ
- ಕೆಂಪೇಗೌಡರ ಜೀವನ ಪ್ರಮುಖ ಘಟನೆಗಳನ್ನು ಬಣ್ಣಿಸುವ ನಾಲ್ಕು ಉಬ್ಬು ಶಿಲ್ಪಗಳ ರಚನೆ, ಕಂಚಿನಲ್ಲಿಯೇ ತಯಾರಾದ ಉಬ್ಬು ಶಿಲ್ಪಗಳನ್ನು ನಾಲ್ಕು ಕಡೆ ಅಂಟಿಸಲಾಗಿದೆ
- ಕೆಂಪೇಗೌಡರ ಕೈಯಲ್ಲಿರುವ ಖಡ್ಗದ ತೂಕ 4ಟನ್
- ಕಂಚಿನ ಪ್ರತಿಮೆ ನಿರ್ಮಾಣಕ್ಕ ತೆಗೆದುಕೊಂಡ ಸಮಯ 18ತಿಂಗಳು
- ಅನಾವರಣಕ್ಕೆ ಪೂರ್ವಭಾವಿಯಾಗಿ ರಾಜ್ಯದಾದ್ಯಂತ 22,000 ಕ್ಕೂ ಹೆಚ್ಚು ಸ್ಥಳಗಳಿಂದ ‘ಮೃತ್ತಿಕೆ’ (ಪವಿತ್ರ ಮಣ್ಣು) ಸಂಗ್ರಹಣೆ
- ಪ್ರತಿಮೆ ಬಳಿ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಾಣ
- ಥೀಮ್ ಪಾರ್ಕ್, ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಭರಿಸಿದ ವೆಚ್ಚ ಸುಮಾರು ₹ 84 ಕೋಟಿ
#statue of prosperity #NadaPrabhu Kempegowda #PM Modi #KIAL Airport