ಹೊಸದಿಗಂತ ವರದಿ, ವಿಜಯಪುರ:
ವಾರಾಂತ್ಯ ಕರ್ಫ್ಯೂ ಉಲ್ಲಂಘಿಸಿದವರಿಗೆ ಗುಮ್ಮಟ ನಗರದಲ್ಲಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಇಲ್ಲಿನ ಗಾಂಧಿ ಚೌಕ್ ಬಳಿಯ ಮಾರುಕಟ್ಟೆಯಲ್ಲಿ ವಾರಾಂತ್ಯ ಕರ್ಫ್ಯೂ ನಿಯಮ ಉಲ್ಲಂಘಿಸಿ ತಳ್ಳುಗಾಡಿಯಲ್ಲಿ ಚಹಾ, ತಿಂಡಿ ಮಾರುತ್ತಿದ್ದ ವ್ಯಾಪಾರಿಗೆ ಪೊಲೀಸ್ ಸಿಬ್ಬಂದಿ ಲಾಠಿ ರುಚಿ ತೋರಿಸಿದ್ದಾರೆ.
ವ್ಯಾಪಾರಿ ತನ್ನ ತಳ್ಳುಗಾಡಿಯೊಂದಿಗೆ ಮಾರುಕಟ್ಟೆಯಿಂದ ಕಾಲು ಕಿತ್ತಿದ್ದಾನೆ. ಅಲ್ಲದೆ ಅನಾವಶ್ಯಕವಾಗಿ ರಸ್ತೆಗೆ ಇಳಿದವರಿಗೂ ಲಾಠಿ ರುಚಿ ತೋರಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.