ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ನಡೆದ ಬ್ರೇಕ್ಫಾಸ್ಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಸ್ನೇಹಪೂರ್ಣ ವಾತಾವರಣ ಕಂಡುಬಂದಿತು. ಬೆಳಗ್ಗೆ ಉಪಹಾರಕ್ಕಾಗಿ ಆಗಮಿಸಿದ ಡಿಸಿಎಂ ಡಿಕೆಶಿ, ಸಿಎಂ ಅವರನ್ನು ಆತ್ಮೀಯವಾಗಿ ಅಲಿಂಗನ ಮಾಡಿಕೊಂಡು ಆಶೀರ್ವಾದ ಪಡೆದರು.
ಸಿಎಂ–ಡಿಸಿಎಂ ನಡುವೆ ಆತ್ಮೀಯ ಕ್ಷಣ
ಸಭೆಯ ಆರಂಭದಲ್ಲೇ ಇಬ್ಬರ ನಡುವಿನ ಉಷ್ಣ ಸ್ವಾಗತ ರಾಜಕೀಯ ವಲಯದಲ್ಲಿ ಗಮನ ಸೆಳೆದಿತು. ಇತ್ತೀಚಿನ ರಾಜಕೀಯ ಚರ್ಚೆಗಳ ನಡುವೆಯೂ ಒಗ್ಗಟ್ಟಿನ ಸಂದೇಶ ನೀಡುವಂತ ದೃಶ್ಯ ಕಂಡುಬಂದಿತು.
ಇದನ್ನೂ ಓದಿ:
ಡಿಕೆಶಿ ಆಗಮಿಸಿದ ಬಳಿಕ ಸಿಎಂ ಮೊದಲಿಗೆ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ನಂತರ ಸಂಪುಟ ಸಚಿವರೊಂದಿಗೆ ಸಮೂಹ ಚರ್ಚೆ ನಡೆಯಿತು.
ಸಂಪೂರ್ಣ ಕ್ಯಾಬಿನೆಟ್ ಭಾಗವಹಿಸಿತ್ತು
ಈ ಸಭೆಯಲ್ಲಿ ಭೈರತಿ ಸುರೇಶ್, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಸಚಿವರು ಭಾಗವಹಿಸಿದ್ದರು.



