Friday, March 24, 2023

Latest Posts

ವಿದ್ಯುತ್ ಲೈನ್ ಕಟ್: ಚೆನ್ನೈ -ಬೆಂಗಳೂರು ರೈಲುಗಳ ಸಂಚಾರ ಸ್ಥಗಿತ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚೆನ್ನೈ -ಬೆಂಗಳೂರು ಮಾರ್ಗದ ಬ್ಯಾಟರಾಯನಹಳ್ಳಿ ಸಮೀಪ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದ್ದು, ರೈಲುಗಳ ಸಂಚಾರ ಸ್ಥಗಿತವಾಗಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿಘಟನೆ ನಡೆದಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಸುಮಾರು 8ಕ್ಕೂ ಹೆಚ್ಚು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಕುರಿತು ರೈಲ್ವೆ ಇಲಾಖೆಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ.
ಮಾರಿಕೊಪ್ಪಂ -ಬೆಂಗಳೂರು, ಬೆಂಗಳೂರು -ಮೈಸೂರು -ತಿರುಪತಿ, ಬೆಂಗಳೂರು -ಚೆನ್ನೈ, ಜೋಲರ್ ಪೇಟೆ- ಬೆಂಗಳೂರು ಮೊದಲಾದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!