ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುರ್ನವಸು ಮಳೆಯಾರ್ಭಟಕ್ಕೆ ಕಾಸರಗೋಡು ಕಂಗಾಲಾಗಿದೆ. ಭಾರೀ ಮಳೆಗೆ ಮಧೂರು ಪರಿಸರದಲ್ಲಿ ವ್ಯಾಪಕ ಸಂಕಷ್ಟ ಉಂಟಾಗಿದ್ದು, ಇಲ್ಲಿನ ಪುರುಷೋತ್ತಮ ಎಂಬವರ ಮನೆಗೆ ವಿದ್ಯುತ್ ಪೂರೈಕೆ ಕಂಬ ಉರುಳಿ ಅಪಾರ ಹಾನಿಯುಂಟಾಗಿದೆ. ಇದೇ ಪರಿಸರದ ಪಟ್ಲ ಬಯಲಿನಲ್ಲಿ ನೆರೆ ನೀರು ಆವರಿಸಿದ್ದು ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಉಳಿಯತ್ತಡ್ಕ, ಮುನ್ನಪ್ಪಾಡಿ ಭಾಗಗಳಲ್ಲಿಯೂ ಮಳೆ ಹಲವು ಸಂಕಷ್ಟ ಹೊತ್ತುತಂದಿದೆ.