ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶಿವರಾಜ್ಕುಮಾರ್ ಸ್ಕ್ರಿಪ್ಟ್ ನೋಡೋದಿಲ್ಲ ನೋಡೋದು ಬರೀ ದುಡ್ಡು ಮಾತ್ರ, ಸಿನಿಮಾ ಫ್ಲಾಪ್ ಆದ್ರೆ ಬೇರೆ ಸಿನಿಮಾಗೆ ಸಹಿ ಮಾಡ್ತಾರೆ, ಅದೇ ರೀತಿ ರಾಜಕೀಯದಲ್ಲೂ ಅಷ್ಟೆ ಅಭ್ಯರ್ಥಿ ಗೆಲ್ಲಲಿ, ಸೋಲಲಿ ಅವರಿಗೆ ದುಡ್ಡು ಬಂದ್ರೆ ಸಾಕು, ರಾಜ್ಯಕ್ಕೆ ಅವರ ಕೊಡುಗೆ ಏನಿದೆ ಹೇಳಿ ಎಂದು ಬಿಗ್ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿ ಪ್ರಶ್ನೆ ಮಾಡಿದ್ದರು.
ಇದೀಗ ಈ ಮಾತಿಗೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಶಿವಣ್ಣ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಇದೀಗ ತನ್ನ ಹೇಳಿಕೆಯನ್ನು ವಾಪಾಸ್ ಪಡೆಯುತ್ತಿದ್ದೇನೆ ಎಂದು ಪ್ರಶಾಂತ್ ಹೇಳಿದ್ದಾರೆ. ಶಿವಣ್ಣ ಅವರನ್ನು ಭೇಟಿ ಮಾಡಿದ್ದೇನೆ ನನ್ನ ಮಾತನ್ನು ಹಿಂಪಡೆಯುತ್ತಿದ್ದೇನೆ, ಅಭಿಮಾನಿಗಳು ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.