ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಬಾರ್ ಪದಾರ್ಥಗಳಲ್ಲಿ ಉತ್ತಮ ರುಚಿ ನೀಡುವ ಪದಾರ್ಥಗಳಲ್ಲಿ ಈರುಳ್ಳಿ ಕೂಡ ಒಂದು. ನೀರು ನಿಲ್ಲದ ಎಲ್ಲಾ ರೀತಿಯ ಫಲವತ್ತಾದ ಮಣ್ಣು ಈ ಕೃಷಿಗೆ ಸೂಕ್ತವಾಗಿದೆ. ಮರಳು ಮಿಶ್ರಿತ ಮೆಕ್ಕಲು ಮಣ್ಣು ಮತ್ತು ಕೆಂಪು ಗೋಡು ಮಣ್ಣು ಸೂಕ್ತ. ಕೆಂಪು, ಬಿಳಿ ಮತ್ತು ಹಳದಿ ಹಸಿರು ಈರುಳ್ಳಿ ಪ್ರಭೇದಗಳನ್ನು ಬೆಳೆಸಲಾಗುತ್ತದೆ.
ಈರುಳ್ಳಿ ಸಸ್ಯ 15 ದಿನ ಕಳೆದ ಬಳಿಕ ಪೈರಿನ ಮೇಲೆ ಕೀಟ ನಿವಾರಕ ದ್ರಾವಣವನ್ನು ಸಿಂಪಡಿಸಬೇಕು. ಈರುಳ್ಳಿ ಬೆಳೆ ಸುತ್ತ ರಕ್ಷಣಾ ಬೆಳೆಗಳಾಗಿ ತೊಗರಿ, ಜೋಳ ಮತ್ತು ಸಜ್ಜೆ ಬೆಳೆಯನ್ನು ನೆಡಬೇಕು. ಬೇವಿಷ ಕಾಯಿಯಿಂದ ತಯಾರಿಸಿದ ದ್ರಾವಣವನ್ನು ವಾರಕ್ಕೆ ಎರಡು ಬಾರಿ ಸಿಂಪಡಿಸಬೇಕು. ಹುಳುಗಳನ್ನು ನಿಯಂತ್ರಿಸಲು ಎಕರೆಗೆ 80 ಕೆಜಿ ಬೇವಿನ ಪುಡಿಯನ್ನು ಬಳಸಲಾಗುತ್ತದೆ.