ʼವಿಶೇಷ ಚೇತನʼ ಭೇಟಿಯಾದ ಪ್ರಧಾನಿ ಮೋದಿ: ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆ ಈ ವರ್ಣಚಿತ್ರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶೇಷ ಚೇತನ ಯುವಕ ಆಯುಷ್ ಕುಂಡಲ್ ಅವರನ್ನು ಭೇಟಿಯಾಗಿದ್ದು, ಅವರು ರಚಿಸಿದ ವರ್ಣಚಿತ್ರವನ್ನು ನೋಡಿ ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ, ಈ ಕ್ಷಣವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ.
‘@aayush_kundal ವರ್ಣಚಿತ್ರವನ್ನ ನೋಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಆಯುಷ್ ತನ್ನ ವರ್ಣಚಿತ್ರಗಳಿಗಾಗಿ ಯೂಟ್ಯೂಬ್ ಚಾನೆಲ್ ಕೂಡ ರಚಿಸಿದ್ದಾರೆ, ಅದು ಅವರ ಜೀವನದ ವಿವಿಧ ಬಣ್ಣಗಳನ್ನ ಒಳಗೊಂಡಿದೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.ನಿರಂತರ ಸ್ಫೂರ್ತಿ ಪಡೆಯುವುದನ್ನ ಮುಂದುವರಿಸಲು, ನಾನು ಅವರನ್ನು ಟ್ವಿಟ್ಟರ್‌ನಲ್ಲಿ ಹಿಂಬಾಲಿಸುತ್ತೇನೆ’ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!