ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶೇಷ ಚೇತನ ಯುವಕ ಆಯುಷ್ ಕುಂಡಲ್ ಅವರನ್ನು ಭೇಟಿಯಾಗಿದ್ದು, ಅವರು ರಚಿಸಿದ ವರ್ಣಚಿತ್ರವನ್ನು ನೋಡಿ ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ನಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ, ಈ ಕ್ಷಣವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದ್ದಾರೆ.
‘@aayush_kundal ವರ್ಣಚಿತ್ರವನ್ನ ನೋಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸುತ್ತೇನೆ. ಆಯುಷ್ ತನ್ನ ವರ್ಣಚಿತ್ರಗಳಿಗಾಗಿ ಯೂಟ್ಯೂಬ್ ಚಾನೆಲ್ ಕೂಡ ರಚಿಸಿದ್ದಾರೆ, ಅದು ಅವರ ಜೀವನದ ವಿವಿಧ ಬಣ್ಣಗಳನ್ನ ಒಳಗೊಂಡಿದೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.ನಿರಂತರ ಸ್ಫೂರ್ತಿ ಪಡೆಯುವುದನ್ನ ಮುಂದುವರಿಸಲು, ನಾನು ಅವರನ್ನು ಟ್ವಿಟ್ಟರ್ನಲ್ಲಿ ಹಿಂಬಾಲಿಸುತ್ತೇನೆ’ ಎಂದು ಹೇಳಿದರು.
आज @aayush_kundal से मिलना मेरे लिए एक अविस्मरणीय क्षण बन गया। आयुष ने जिस प्रकार पेंटिंग में महारत हासिल की और अपनी भावनाओं को पैर की उंगलियों से आकार दिया, वो हर किसी को प्रेरित करने वाला है। अनवरत प्रेरणा मिलती रहे, इसलिए मैं उन्हें ट्विटर पर फॉलो कर रहा हूं। pic.twitter.com/hHskGAFQXW
— Narendra Modi (@narendramodi) March 24, 2022