ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಾಳೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2022-23 ನೇ ಸಾಲಿನ ಎರಡನೇ ಹಂತದ ಸಂಸದ ಖೇಲ್ ಮಹಾಕುಂಭವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ(PM Office) ಪ್ರಕಟಣೆ ತಿಳಿಸಿದೆ.
2021 ರಿಂದ ಬಸ್ತಿಯ ಲೋಕಸಭಾ ಸಂಸದರಾದ ಹರೀಶ್ ದ್ವಿವೇದಿ ಅವರು ಜಿಲ್ಲೆಯಲ್ಲಿ ಸಂಸದ್ ಖೇಲ್ ಮಹಾಕುಂಭವನ್ನು ಆಯೋಜಿಸುತ್ತಿದ್ದಾರೆ. ಮೊದಲ ಹಂತವನ್ನು 10 ರಿಂದ 16 ಡಿಸೆಂಬರ್, 2022 ರವರೆಗೆ ಆಯೋಜಿಸಲಾಗಿತ್ತು. ಖೇಲ್ ಮಹಾಕುಂಭದ ಎರಡನೇ ಹಂತವನ್ನು ನಾಳೆಯಿಂದ ಜನವರಿ 28 ರವರೆಗೆ ಆಯೋಜಿಸಲಾಗಿದೆ.
ಇಲ್ಲಿ ಕುಸ್ತಿ, ಕಬಡ್ಡಿ, ಖೋ ಖೋ, ಬಾಸ್ಕೆಟ್ಬಾಲ್, ಫುಟ್ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಜಿಲ್ಲೆಯ ಬಸ್ತಿ ಮತ್ತು ನೆರೆಯ ಪ್ರದೇಶಗಳ ಯುವಕರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮತ್ತು ವೇದಿಕೆಯನ್ನು ಒದಗಿಸುತ್ತದೆ.ಈ ಮೂಲಕ ಕ್ರೀಡೆಯನ್ನು ವೃತ್ತಿ ಆಯ್ಕೆಯಾಗಿ ತೆಗೆದುಕೊಳ್ಳಲು ಉತ್ತೇಜಿಸಲಾಗುತ್ತದೆ.