ಕಾಡುನಾಯಿಗಳ ದಾಳಿಗೆ ಬೆದರಿ ನಾಲೆಗೆ ಬಿದ್ದ ಜಿಂಕೆ ಮರಿಯ ರಕ್ಷಣೆ

ಹೊಸದಿಗಂತ ವರದಿ, ಕುಶಾಲನಗರ
ಇಲ್ಲಿಗೆ ಸಮೀಪದ ಹುದುಗೂರು ಬಳಿ ಹಾರಂಗಿ ಮುಖ್ಯ ನಾಲೆಗೆ ಬಿದ್ದಿದ್ದ ಜಿಂಕೆ ಮರಿಯನ್ನು ಸ್ಥಳೀಯ ಸೀತಾ ಕಾಲೋನಿ ಯುವಕರ ತಂಡ ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಸಮೀಪದ ಹುದುಗೂರು ಮೀಸಲು ಅರಣ್ಯ ಪ್ರದೇಶದಿಂದ ಕಾಡು ನಾಯಿ (ಕೆನ್ನಾಯಿ)ಗಳು ಜಿಂಕೆ ಮರಿಯನ್ನು ಅಟ್ಟಿಸಿಕೊಂಡು ಬಂದಾಗ ಹಾರಂಗಿಯ ಮುಖ್ಯ ನಾಲೆಗೆ ಬಿದ್ದಿದೆ.
ನಾಲೆಯಲ್ಲಿ ಈಗಾಗಲೇ ಮೂರು ಅಡಿಗಳಷ್ಟು ನೀರು ಹರಿಯುತ್ತಿದ್ದು, ಜಿಂಕೆ ಮರಿ ನಾಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದುದನ್ನು ಗಮನಿಸಿದ ಸೀತಾ ಕಾಲೋನಿಯ ಯವಕರು ನಾಲೆಗೆ ಇಳಿದು ಜಿಂಕೆಯನ್ನು ರಕ್ಷಣೆ ಮಾಡಿ ಹುದುಗೂರು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದರು. ನಂತರ ಜಿಂಕೆ ಮರಿಯನ್ನು ಯಡವನಾಡು ಮೀಸಲು ಅರಣ್ಯಕ್ಕೆ ಬಿಡಲಾಯಿತು.
ಈ ಸಂದರ್ಭ ಸೀತಾ ಕಾಲೋನಿಯ ಅರುಣ, ರಘು ರವಿ, ಉಮೇಶ್, ಅರಣ್ಯ ಇಲಾಖೆಯ ಮನುಕುಮಾರ್, ರತೀಶ್, ಭೀಮಣ್ಣ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!