ಪ್ರಚೋದನಾಕಾರಿ ಭಾಷಣ: ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ ಆರೋಪದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಗಿಗುಡ್ಡದ ಗಲಭೆ ಖಂಡಿಸಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಹೇಳಿದ ಆರೋಪದಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ.

ಹಸಿರು ಬಣ್ಣ ಕಿತ್ತಾಕಿ, ಕೇಸರಿ ಬಣ್ಣ ಬರಬೇಕು. ಅಲ್ಲಿಯವರೆಗೂ ಬಿಜೆಪಿ ಹೋರಾಟ ಮಾಡುತ್ತದೆ. ಅಖಂಡ ಭಾರತದ ಕನಸು ಇತ್ತು ಆದರೆ ದೇಶದ್ರೋಹಿ ಮುಸ್ಲಿಮರಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ.

ಇಂದಿನವರೆಗೂ ಹಿಂದೂಗಳು ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಹರ್ಷನ ಕೊಲೆಯಾದಾಗ ಲಾಂಗು, ಮಚ್ಚು ಹಿಡಿದು ಮುಸ್ಲಿಮರ ಬೀದಿಗಳಿಗೆ ಹೋಗಿದ್ದೇವಾ? ಹೋಗಿದ್ದಿದ್ರೆ ಮಾರಿ ಹಬ್ಬದಲ್ಲಿ ಕುರಿ ಕಡಿದ ಹಾಗೆ ಕಡಿದು ಬಿಟ್ಟಿರ‍್ತಿದ್ವಿ. ಆದರೆ ನಾವು ಹಾಗೆ ಮಾಡಿಲ್ಲ. ಹಿಂದೂಗಳು ಮುಸ್ಲಿಮರು ಸಹಬಾಳ್ವೆ ಜೀವನ ಮಾಡಬೇಕು ಅನ್ನೋದು ನಮ್ಮ ಆಸೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!