ಪುನೀತ್ ಎಲ್ಲರಿಗೂ ಮಾದರಿ: ನಟ ವಿಶಾಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ವಿಶಾಲ್ ಲಾಠಿ ಸಿನಿಮಾ ಪ್ರಚಾರ ಕಾರ್ಯುದಲ್ಲಿ ಬ್ಯುಸಿಯಾಗಿದ್ದು,ಇದರ ಪ್ರಮೋಷನ್ ವೇಳೆ ಪುನೀತ್​ ರಾಜ್​ಕುಮಾರ್​ ಮತ್ತು ಬೆಂಗಳೂರಿನ ಬಗ್ಗೆ ಮಾತನಾಡಿದ್ದಾರೆ.

ಲಾಠಿ ಸಿನಿಮಾ ಪ್ರಚಾರ ಹಿನ್ನೆಲೆ ಬೆಂಗಳೂರಿಗೆ ಬಂದಿದ್ದ ನಟ ವಿಶಾಲ್ , ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾ ದೇಶದ ಎಲ್ಲಾ ಹೆಡ್ ಕನ್ಸ್​​ಟೇಬಲ್​​ ಅವರಿಗೆ ಅರ್ಪಿಸುತ್ತೇವೆ. ಈ ಸಿನಿಮಾ ನಿಜಕ್ಕೂ ಎಲ್ಲಾ ವರ್ಗದ ಅಭಿಮಾನಿಗಳಿಗೆ ಇಷ್ಟ ಆಗಲಿದೆ. ಕ್ಲೈಮಾಕ್ಸ್​​ನಲ್ಲಿ ಒಂದು ಸಂದೇಶ ಇದೆ ಎಂದು ವಿಶಾಲ್ ತಿಳಿಸಿದರು.

ಇನ್ನು ದಿ. ಪುನೀತ್ ರಾಜ್​ಕುಮಾರ್ ಇಷ್ಟ ಆಗಿದ್ದು, ಅವರ ಸರಳತೆ ಗುಣದಿಂದ ಅವರೋರ್ವ ಸೂಪರ್ ಸ್ಟಾರ್ ಆಗಿದ್ದರೂ ಕೂಡ ಸರಳವಾಗಿ ಜೀವನ ನಡೆಸಿದರು. ಯಾರಿಗೂ ಗೊತ್ತಿಲ್ಲದೇ ಮಾಡಿರೋ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ. ಹೀಗಾಗಿ ಪುನೀತ್ ಅವರ ಮೇಲೆ ನನಗೆ ಗೌರವ ಇದೆ ಅಂತಾ ತಿಳಿಸಿದರು.

ಸದ್ಯ ಶಿವ ರಾಜ್​ಕುಮಾರ್ ಹಾಗು ಗೀತಾ ಶಿವ ರಾಜ್​​ಕುಮಾರ್ ನೋಡಿಕೊಳ್ಳುತ್ತಿರುವ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಜೊತೆ ಕಾಲ ಕಳೆದೆ. ಮನಸ್ಸಿಗೆ ತುಂಬಾ ಖುಷಿಯಾಯಿತು. ಇನ್ನು ಶಿವಣ್ಣ ಯಾವಾಗ ಹೇಳುತ್ತಾರೋ ಆಗ ನಾನು ಶಕ್ತಿಧಾಮದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆಂದು ವಿಶಾಲ್ ಹೇಳಿದರು.

ಇದೇ ವೇಳೆ ನನ್ನ ತಂದೆಯ ಆಸೆಯಂತೆ ನನಗೆ ಕನ್ನಡದಲ್ಲಿ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ. ಮುಂದಿನ ದಿನಗಳಲ್ಲಿ ನಟನೆ ಮಾಡುತ್ತೇನೆ. ಈಗ ನಾನು ನಿರ್ದೇಶನ ಮಾಡಬೇಕಿರೋ ಸಿನಿಮಾ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ನಟ ವಿಶಾಲ್ ಲಾಠಿ ಸಿನಿಮಾದಲ್ಲಿ ಹೆಡ್ ಕಾನ್ಸ್​​​ಟೇಬಲ್​​​ ಪಾತ್ರ ಮಾಡಿದ್ದಾರೆ. ಈ ಪಾತ್ರ ವಿಶಾಲ್​​ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಇದೇ ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ಲಾಠಿ ಸಿನಿಮಾ ತೆರೆ ಕಾಣಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!