Monday, October 2, 2023

Latest Posts

ರಾಜ್ಯದಲ್ಲಿ ಶೀಘ್ರ ಲೋನ್‌ ಆಪ್‌, ಆನ್‌ಲೈನ್‌ ಗೇಮ್‌ ಬ್ಯಾನ್‌: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಆನ್‌ ಲೈನ್ ಗೇಮ್‌ ಮತ್ತು ಲೋನ್‌ ಆಪ್ಯ್‌ ಬ್ಯಾನ್‌ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಮಂಗಳವಾರ ದಕ್ಷಿಣ ಕನ್ನಡದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಹಲವು ರಾಜ್ಯಗಳಲ್ಲಿ ಈಗಾಗಲೇ ಆನ್‌ಲೈನ್ ಗೇಮ್‌ ಬ್ಯಾನ್‌ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ನಾವು ಕೂಡ ಚಿಂತನೆ ನಡೆಸಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಸೈಬರ್‌ ಕ್ರೈಮ್‌ಗೆ ಕಡಿವಾಣ ಹಾಕುವುದಕ್ಕೆ ಪೋಲಿಸರಿಗೆ ಸೂಚನೆ ನೀಡಲಾಗಿದೆ. ಇನ್ನೂ ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುವಾದ ಗಲಾಟೆಗಳಿಗೆ, ನೈತಿಕ ಪೋಲಿಸ್‌ ಗಿರಿಗೆ ಕಡಿವಾಣ ಹಾಕಲೇ ಬೇಕು ಅಂತ ಪೋಲಿಸರಿಗೆ ಸೂಚನೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!