ಮಣಿಪುರ ಹಿಂಸಾಚಾರಕ್ಕೆ ಪ್ರಮುಖ ಕಾರಣ ನೀಡಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಿದೆ, ಕೆಲವು ಘಟನೆಗಳಂತೂ ಆತಂಕ ಉಂಟುಮಾಡಿವೆ. ಮಣಿಪುರ ಹಿಂಸಾಚಾರಕ್ಕೆ ವಿಭಜನೆ, ದ್ವೇಷ, ಕೋಪ ರಾಜಕೀಯವೇ ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಒಂದು ರಾಜ್ಯದಲ್ಲಿ ವಿಭಜನೆ, ದ್ವೇಷ ಮತ್ತು ಕೋಪದ ರಾಜಕೀಯವನ್ನು ಬಳಸಿದಾಗ ಏನಾಗುತ್ತದೆ ಎನ್ನುವುದಕ್ಕೆ ಮಣಿಪುರ ಹಿಂಸಾಚಾರವೇ ದೊಡ್ಡ ಉದಾಹರಣೆ ಎಂದು ಹೇಳಿದ್ದಾರೆ.

ಹಿಂಸಾಚಾರ ಆತಂಕಕಾರಿಯಾಗಿದ್ದು, ಈ ಕೂಡಲೇ ಎಲ್ಲವೂ ನಿಲ್ಲಬೇಕು, ವಿಭಜನೆ, ದ್ವೇಷ ಮತ್ತು ಕೋಪದ ರೀತಿಯ ರಾಜಕೀಯದ ನೇರ ಪರಿಣಾಮ ಮಣಿಪುರ ಹಿಂಸಾಚಾರವಾಗಿದೆ ಎಂದಿದ್ದಾರೆ.

ಮಣಿಪುರ ಹಿಂಸಾಚಾರದಲ್ಲಿ ಮಾನಸಿಕವಾಗಿ ಆಗಿರುವ ಗಾಯಗಳು ಮಾಸಲು ಹಲವು ವರ್ಷಗಳೇ ಬೇಕಾಗುತ್ತವೆ. ಇಡೀ ರಾಜ್ಯ ಮತ್ತೆ ಮೊದಲಿನಂತಾಗಲು ವರ್ಷಗಳೇ ಬೇಕು. ಈಗ ಅನುಭವಿಸಿರುವ ಕಷ್ಟವನ್ನು ಜನರು ಮರೆಯುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!