ರಾಹುಲ್ ಗಾಂಧಿ ಅವರದು ಭಾರತ ತೋಡೋ ಯಾತ್ರೆ: ಸಚಿವ ಬಿ.ಸಿ.ಪಾಟೀಲ

ಹೊಸದಿಗಂತ ವರದಿ ಗದಗ:
ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಅಲ್ಲ ಅದು ಭಾರತ ತೋಡೋ ಯಾತ್ರೆ ಆಗಿದೆ ಭಾರತದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಪಾದ್ರಿಯೊಂದಿಗೆ ಕೈಜೋಡಿಸಿರುವದು ಅವರ ಸಂಸ್ಕೃತಿ ತೋರಿಸುತ್ತಿದೆ ಎಂದು ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ನಲ್ಲಿ ಸಿದ್ದರಾಮೋತ್ಸವ,ಡಿ.ಕೆ.ಶಿ ಉತ್ಸವ, ಪರಮೇಶ್ವರ ಉತ್ಸವವಿದೆ ಆದರೆ ನಮ್ಮಲ್ಲಿ ಜನಸ್ಪಂಧನ ಮಾತ್ರವಿದೆ. ಡಬಲ್ ಇಂಜಿನ್ ಸರಕಾರದಿಂದ ಅಭಿವೃದ್ದಿಯ ಕೆಲಸಗಳನ್ನು ನೋಡಿ ನಿರೀಕ್ಷೆಗೂ ಮೀರಿ ಜನರು ಸ್ಪಂಧಿಸಿರುವದು ವಿರೋಧಿಗಳಿಗೆ ಉತ್ತರ ನೀಡಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!