ಹೊಸದಿಗಂತ ವರದಿ ಹುಬ್ಬಳ್ಳಿ:
ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆಯ ಬೇಕಾದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ ಟೆಸ್ಟ್ ಪಂದ್ಯ ಮೈದಾನ ತೇವಾಂಶವಿರುವ ಕಾರಣ ಪಂದ್ಯದ ಸಮಯ ಮುಂದುಡಲಾಗಿದೆ.
ಬೆಳಿಗ್ಗೆ ೯.೩೦ ಕ್ಕೆ ಆರಂಭವಾಗಬೇಕಾದ ಪಂದ್ಯ ಬುಧವಾರ ರಾತ್ರಿ ಮಳೆಯಾದ ಕಾರಣ ಮೈದಾನ ತೇವಾಂಶ ಇರುವ ಕಾರಣ ಮಧ್ಯಾಹ್ನ ೧ ಗಂಟೆ ಆರಂಭಿಸಲು ನಿರ್ಧರಿಸಿದ್ದಾರೆ.
ಅಭಿಮಾನಿಗಳ ದಂಡು: ಮೂರು ವರ್ಷದ ಬಳಿಕ ಕೆಎಸ್ ಸಿಎ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದ್ದು, ಪಂದ್ಯ ವೀಕ್ಷಣೆಗೆ ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಬಂದಿದ್ದು ಪಂದ್ಯ ವೀಕ್ಷಣೆಗೆ ಕಾತರರಾಗಿದ್ದಾರೆ.
ಇನ್ನೂ ವಿದ್ಯಾರ್ಥಿಗಳು ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡ ಆಟಗಾರರಿಂದ ಆಟೋಗ್ರಾಫ್ ಹಾಗೂ ಸೇಲ್ಫಿ ಪಡೆಯಲು ಮುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಉಭಯ ತಂಡದ ಆಟಗಾರರು ವಿದ್ಯಾರ್ಥಿಗಳಿಗೆ ಸೇಲ್ಫಿ ನೀಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಸೇಲ್ಫಿ ಪಡೆದು ಖಷಿಪಟ್ಟರು.