ಮತ್ತೆ ರಾಮಮಂದಿರ ಕೆಡವಬೇಕು! – ಉಗ್ರ ಅಲ್ ಖೈದಾ ಮುಖವಾಣಿಯಲ್ಲಿ ಮುಸ್ಲಿಮರಿಗೆ ಪ್ರಚೋದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸುಪ್ರಿಂ ಕೋರ್ಟಿನ ಐತಿಹಾಸಿಕ ತೀರ್ಪಿನ ನಂತರ ದಶಕಗಳ ಹೋರಾಟ ಕೊನೆಯಾಗಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಮುಂದಿನ ವರ್ಷದಲ್ಲಿ ರಾಮಮಂದಿರ ಉದ್ಘಾಟನೆಯೂ ಆಗಲಿದ್ದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದರ್ಶನ ಪಡೆಯಲು ಅನೇಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದರ ನಡುವೆಯೇ ಅಲ್‌ ಖೈದಾ ಉಗ್ರಗಾಮಿ ಸಂಘಟನೆಯ ʼಘಜ್ವಾ ಎ ಹಿಂದ್‌ʼ ಎಂಬ ನಿಯತಕಾಲಿಕ ಪ್ರಕಟಣೆಯು ರಾಮಮಂದಿರದ ವಿಧ್ವಂಸದ ಬೆದರಿಕೆ ಹಾಕಿದೆ. ʼಮೆಕ್ಕಾದಲ್ಲಿ 360 ಮೂರ್ತಿಗಳನ್ನು ನಾಶಮಾಡಿದಂತೆಯೇ ಆ ರಾಮಮಂದಿರವನ್ನೂ ದ್ವಂಸ ಮಾಡಿ ಮತ್ತೆ ಅಲ್ಲಿ ಮಸೀದಿ ತಲೆ ಎತ್ತುವಂತೆ ಮಾಡಲಾಗುತ್ತದೆʼ ಎಂದು ಇಸ್ಲಾಮಿಕ್‌ ಭಯೋತ್ಪಾದನಾ ಸಂಘಟನೆ ಅಲ್ ಖೈದಾದ ʼಘಜ್ವಾ ಎ ಹಿಂದ್ʼ ಪ್ರಕಟಣೆ ಹೇಳಿದೆ ಎಂದು ವರದಿಯಾಗಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ, ಭಾರತದಲ್ಲಿ ಆಡಳಿತದಲ್ಲಿರುವ ಪ್ರಧಾನಿ ಮೋದಿ ಹಾಗು ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ʼಘಜ್ವಾ ಎ ಹಿಂದ್ʼ ನಲ್ಲಿ ಪ್ರಚೋದನಾಕಾರಿಯಾಗಿ ಬರೆಯಲಾಗಿದ್ದು, ಆ ಮೂರ್ತಿಪೂಜಕರ ಆಡಳಿತವನ್ನು ಕೊನೆಗಾಣಿಸಿ ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಬರುವಂತೆ ಮಾಡಬೇಕು. ಅದಕ್ಕಾಗಿ ಭಾರತೀಯ ಮುಸಲ್ಮಾನರು ಒಗ್ಗಟ್ಟಾಗಿ ಹೋರಾಡಬೇಕು ಎಂದು ಬರೆಯಲಾಗಿದೆ. ಹಿಂದೂಗಳು ಭಾರತದಲ್ಲಿ ಪ್ರಬಲರಾಗುತ್ತಿದ್ದಾರೆ. ಆ ಮೂರ್ತಿಪೂಜಕರನ್ನು ಹತ್ತಿಕ್ಕಲು ಮುಸ್ಲಿಮರು ತಮ್ಮ ರಕ್ತವನ್ನು ತ್ಯಾಗಮಾಡಿ ಪ್ರಾಣಕೊಡಲೂ ಸಿದ್ಧರಾಗಬೇಕು ಎಂದೂ ಬರೆಯಲಾಗಿದೆ.

ಭಾರತದ ಆಡಳಿತವು ಜಾತ್ಯಾತೀತತೆಯ ಹೆಸರಲ್ಲಿ ಮುಸಲ್ಮಾನರನ್ನು ಹತ್ತಿಕ್ಕುತ್ತಿದೆ. ಅವರನ್ನು ಹಿಂದೂಗಳ ಅಡಿಯಾಳುಗಳನ್ನಾಗಿಸಲಾಗುತ್ತಿದೆ. ಜೈಶ್ರೀರಾಮ್‌ ಎನ್ನುವವರರು ಇಂದು ದೆಹಲಿಯಿಂದ ಢಾಕಾದವರೆಗೆ ಆಡಳಿತ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಸಹಬಾಳ್ವೆಯನ್ನು ಭಾರತೀಯ ಮುಸಲ್ಮಾನರು ಎಂದಿಗೂ ಒಪ್ಪಿಕೊಳ್ಳಬಾರದು. ಇದು ಮುಸಲ್ಮಾನರ ಮೇಲಾಗುತ್ತಿರುವ ಅತ್ಯಾಚಾರ. ರಷ್ಯಾದಲ್ಲಿ, ಚೀನಾದಲ್ಲಿ ಎಲ್ಲ ಕಡೆ ಜಾತ್ಯಾತೀತತೆಯ ಹೆಸರಲ್ಲಿ ಮುಸಲ್ಮಾನರನ್ನು ಹತ್ತಿಕ್ಕಲಾಗಿದೆ. ಭಾರತದಲ್ಲಿ ಹಾಗಾಗಲು ಬಿಡಬಾರದು. ಹಿಂದೂಗಳು ಮುಸ್ಲಿಮರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಅವರನ್ನು ನಾಶಮಾಡಲು ಮುಸಲ್ಮಾನರು ಸಿದ್ಧರಾಗಬೇಕು. ಇದಕ್ಕಾಗಿ ಬೆವರು, ರಕ್ತ, ಪ್ರಾಣ ತ್ಯಾಗ ಮಾಡಬೇಕು ಎಂದೂ 110 ಪುಟಗಳ ʼಘಜ್ವಾ ಎ ಹಿಂದ್ʼ ಪ್ರಕಟಣೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!