ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ: ಟೋಪಿಯಿಂದ ಸಿಕ್ತು ಮಹತ್ವದ ಸುಳಿವು, ಈತನಿಗೂ ಚೆನ್ನೈಗೂ ಏನು ಸಂಬಂಧ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏನ್‌ಐಗೆ ಸ್ಫೋಟಕ ಮಾಹಿತಿ ದೊರೆತಿದ್ದು, ಆತನಿಗೆ ಚೆನ್ನೈ ಲಿಂಕ್‌ ಇದೆ ಎಂದು ತಿಳಿದುಬಂದಿದೆ.

ಶಂಕಿತ ಸ್ಫೋಟದಿಂದ ಕೆಲ ದೂರದಲ್ಲಿ ತನ್ನ ಟೋಪಿಯನ್ನು ಬಿಟ್ಟು ಹೋಗಿದ್ದ. ಪೊಲೀಸರು ಈ ಕ್ಯಾಪ್‌ ಮೂಲವನ್ನು ಬೇಧಿಸಿದ್ದು, ಇದನ್ನು ಆತ ಚೆನ್ನೈನ ಮಾಲ್‌ ಒಂದರಲ್ಲಿ ಖರೀದಿ ಮಾಡಿದ್ದ ಎನ್ನುವ ಮಾಹಿತಿ ದೊರಕಿದೆ.

ಚೆನ್ನೈನ ಮಾಲ್‌ನಲ್ಲಿ ಶಂಕಿತ ಟೋಪಿ ಖರೀದಿಸುತ್ತಿದ್ದ ವೇಳೆ ಆತನ ಜೊತೆ ಮತ್ತೊಬ್ಬ ವ್ಯಕ್ತಿ ಇರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿದೆ. ಇನ್ನು ಕ್ಯಾಪ್‌ನ್ನು ಶಂಕಿತ ಹೆಚ್ಚು ಹೊತ್ತು ಬಳಸಿದ್ದ ಕಾರಣ ಅದರಲ್ಲಿ ಆತನ ಕೂದಲುಗಳಿದ್ದವು. ಇದನ್ನು ಡಿಎನ್‌ಎ ಟೆಸ್ಟ್‌ಗೆ ನೀಡಲಾಗಿದೆ.

ಈ ಆರೋಪಿಗಳು ಕರ್ನಾಟಕದವರೇ ಎಂದು ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಮಾಸಾವೀರ್‌ ಹಾಗೂ ಹುಸೇನ್‌ ಶಬೀದ್‌ ಇರಬಹುದು ಎಂದು ಹೇಳಲಾಗಿದೆ. ಇವರಿಬ್ಬರು ತಮಿಳುನಾಡಿಗೆ ತೆರಳಿ ಎರಡು ತಿಂಗಳು ಲಾಡ್ಜ್‌ನಲ್ಲಿ ಉಳಿದಿರುವ ಬಗ್ಗೆ ಮಾಹಿತಿ ದೊರೆತಿದೆ. ತಮಿಳುನಾಡಿನಲ್ಲಿ ಇವರು ಏನು ಮಾಡುತ್ತಿದ್ದರು, ಅಲ್ಲಿ ಯಾರ ಸಹಾಯ ಪಡೆದಿದ್ದರು ಎನ್ನುವ ಬಗ್ಗೆ ಹುಡುಕಾಟ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!