ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ನಟ ಮಾಸ್ ಮಹಾರಾಜ ರವಿತೇಜಗೆ ಸಂಕಷ್ಟ ಎದುರಾಗಿದ್ದು, ಹೈದ್ರಾಬಾದ್ ನ ಸುಬ್ರಹ್ಮಣ್ಯ ಮೂರ್ತಿ ಜುಬ್ಲಿ ಹಿಲ್ಸ್ ಠಾಣೆಯಲ್ಲಿ ರವಿತೇಜ ವಿರುದ್ಧ ದೂರು ದಾಖಲಾಗಿದೆ. ಕೇವಲ ರವಿತೇಜ ಮಾತ್ರವಲ್ಲ ಕ್ರ್ಯಾಕ್ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧವೂ ದೂರು ದಾಖಲಾಗಿದೆ.
2021ರಲ್ಲಿ ತೆರೆಗೆ ಬಂದಿದ್ದ ರವಿತೇಜ ಹಾಗೂ ನಿರ್ದೇಶಕ ಗೋಪಿಚಂದ್ ಮಾಲಿನೇನಿ ಕಾಂಬಿನೇಷನ್ನಡಿ ಮೂಡಿಬಂದಿದ್ದ ಕ್ರ್ಯಾಕ್ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಕಮಾಲ್ ಮಾಡಿತ್ತು.
ನೈಜ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು, ತಮ್ಮ ವಿದ್ಯಾರ್ಥಿ ದಿನಗಳಲ್ಲಿ, ತಮ್ಮ ಊರಿನಲ್ಲಿ ಹಿರಿಯರಿಂದ ಕೇಳಿದ್ದ ಕಥೆಯೊಂದನ್ನು ನಿರ್ದೇಶಕ ಗೋಪಿಚಂದನ್ ಮಲಿನೇನಿ ಕ್ರ್ಯಾಕ್ ಸಿನಿಮಾ ಮಾಡಿರುವುದಾಗಿ ಹೇಳಿದ್ದರು. ಆದ್ರೀಗ ಸಿಕಂದರಾಬಾದ್ ಮೂಲದ ಬರಗಾರ ಶಿವ ಸುಬ್ರಹ್ಮಣ್ಯಮೂರ್ತಿ ತಮ್ಮ ಪುಸ್ತಕದ ಸ್ಫೂರ್ತಿಯಿಂದ ಕ್ರ್ಯಾಕ್ ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ನಟ, ನಿರ್ದೇಶಕ, ನಿರ್ಮಾಪಕರಿಗೆ ನೋಟೀಸ್ ನೀಡಲಾಗಿತ್ತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರದೆ ಇರದ್ರಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕ್ರ್ಯಾಕ್ ಸಿನಿಮಾದಲ್ಲಿ ರವಿತೇಜ ಶ್ರುತಿ ಹಾಸನ್ ಜೋಡಿಯಾಗಿ ನಟಿಸಿದ್ದರು.