ಪಂಜುರ್ಲಿ ದೈವದ ವೇಷ ತೊಟ್ಟು ರೀಲ್ಸ್: ಧರ್ಮಸ್ಥಳಕ್ಕೆ ತೆರಳಿ ಕ್ಷಮೆ ಯಾಚಿಸಿದ ಯುವತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಹೊಸ ಸಿನಿಮಾ ಬಂದಾಗ ಅದರ ಡೈಲಾಗ್ಸ್, ಹಾಡುಗಳಿಗೆ ರೀಲ್ಸ್ ಮಾಡೋದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ. ಅದು ಅತಿರೇಕಕ್ಕೆ ಹೋಗಿ ಕಾಂತಾರ ಸಿನಿಮಾದಲ್ಲಿ ರಿಷಭ್ ಶೆಟ್ಟಿ ರೀತಿ ನಟನೆ ಮಾಡಿ ಯುವತಿಯೊಬ್ಬಳು ಯಡವಟ್ಟು ಮಾಡಿಕೊಂಡಿದ್ದಾಳೆ.

ಪಂಜುರ್ಲಿ ದೈವದ ರೀತಿ ವೇಷ ಧರಿಸಿ ರೀಲ್ಸ್ ಮಾಡಿದ್ದು, ತುಳುಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಯುವತಿ ಧರ್ಮಸ್ಥಳಕ್ಕೆ ತೆರಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ ಶ್ವೇತಾ ರೆಡ್ಡಿ ವರಾಹ ರೂಪಂ ಹಾಡಿಗೆ ರೀಲ್ಸ್ ಮಾಡಿ ಇದೀಗ ಕ್ಷಮೆಯಾಚಿಸಿದ್ದಾರೆ.

ಈಕೆಯನ್ನು ಧರ್ಮಸ್ಥಳದ ಮಂಜುನಾಥನೇ ನೋಡಿಕೊಳ್ಳಲಿ ಎಂದು ನೆಟ್ಟಿಗರು ಹೇಳಿದ್ದಕ್ಕೆ ಯುವತಿ ಭಯಪಟ್ಟಿದ್ದಾಳೆ. ತಕ್ಷಣವೇ ರೀಲ್ಸ್ ಡಿಲೀಟ್ ಮಾಡಿ ಮಂಜುನಾಥನ ಬಳಿ ಬಂದು ಕ್ಷಮೆ ಕೇಳಿದ್ದಾಳೆ. ವೀರೆಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!