ರಿಷಭ್ ಶೆಟ್ಟಿ ಮೇಲೆ ನನಗೆ ಸ್ವಲ್ಪ ಹೊಟ್ಟೆ ಕಿಚ್ಚು: ನವಾಝುದ್ದೀನ್ ಸಿದ್ದಿಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂತಾರ ಸಿನಿಮಾ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಭ್ ಶೆಟ್ಟಿ ಸಖತ್ ಬ್ಯುಸಿ ಆಗಿದ್ದು, ಸಿನಿಮಾವನ್ನು ಇಡೀ ವಿಶ್ವವೇ ಮುಕ್ತಕಂಠದಿಂದ ಹೊಗಳುತ್ತಿದ್ದೆ.

ಇತ್ತೀಚೆಗೆ ಮುಂಬಯಿ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಭ್​ ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ಅವರನ್ನು ಭೇಟಿಯಾಗಿದ್ದು, ಇಬ್ಬರು ಪರಸ್ಪರ ಮಾತುಗಳನ್ನಾಡಿದ್ದಾರೆ.

ಈ ವೇಳೆ ರಿಷಭ್​ ಬಗ್ಗೆ ಒಂದೆರೆಡು ಮಾತನಾಡುವಂತೆ ಸಿದ್ದಿಕಿ ಬಳಿ ಹೇಳಿದ್ದಾಗ, ಇಡೀ ದೇಶ ಕಾಂತಾರದಲ್ಲಿ ರಿಷಭ್​ ಅವರನ್ನು ನೋಡಿ ಶಾಕ್​ ಆಗಿದೆ.ಅವರು ತಮ್ಮ ಸಿನಿಮಾದ ಪ್ರಚಾರವನ್ನೇ ಮಾಡಲಿಲ್ಲ. ಸದ್ದಿಲ್ಲದೆ ತಮ್ಮ ಕೆಲಸ ಮುಗಿಸಿ, ಅದರಿಂದಲೇ ಎಲ್ಲರನ್ನು ಮೆಚ್ಚಿಸಿದರು. ಈ ರೀತಿ ಯಾರಾದರೂ ಒಳ್ಳೆಯ ಕೆಲಸ ಮಾಡಿದಾಗ ಸ್ವಲ್ಪ ಹೊಟ್ಟೆ ಕಿಚ್ಚು ಬರುವುದು ಸಹಜ ಮತ್ತು ಅದೇ ಹೊಟ್ಟೆಕಿಚ್ಚಿನಿಂದ ಒಳ್ಳೆಯ ಸ್ಪರ್ಧೆಗೆ ಸ್ಫೂರ್ತಿ ಸಿಗುತ್ತದೆ ಎಂದರು.

ಇಲ್ಲಿ ನಿಜವಾಗಿಯೂ ಹೊಟ್ಟೆ ಕಿಚ್ಚು ಇದೆ. ಏಕೆಂದರೆ, ಆತ ಅಂತಹ ಒಳ್ಳೆಯ ಕೆಲಸವನ್ನು ಮಾಡಿದ್ದಾನೆ. ಆದರೆ, ಇದು ಕೆಟ್ಟ ರೀತಿಯ ಹೊಟ್ಟೆಕಿಚ್ಚು ಅಲ್ಲ. ಈ ರೀತಿಯ ಹೊಟ್ಟೆ ಕಿಚ್ಚು ನಿಮ್ಮನ್ನು ಕಾಲ್ಬೆರಳುಗಳ ಮೇಲೆ ನಿಲ್ಲುವಂತೆ ಮಾಡುತ್ತದೆ ಮತ್ತು ಪರಿಶ್ರಮ ಪಡುವಂತೆ ಹುರಿದುಂಬಿಸುತ್ತದೆ ಎಂದು ರಿಷಭ್​ ಅವರ ಯಶಸ್ಸಿಗೆ ನವಾಝುದ್ದೀನ್ ಸಿದ್ದಿಖಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಸಿದ್ದಿಖಿ ಅವರನ್ನು ಹೊಗಳಿದ್ದು, ನಜಾಜುದ್ದೀನ್​ ಸಿದ್ದಿಖಿ ಅವರಿಂದ ಸ್ಫೂರ್ತಿಗೊಂಡಿರುವುದಾಗಿ ಹೇಳಿದರು. ನವಾಜ್​ ಭಾಯ್​ ಅವರ ಅನೇಕ ಸಿನಿಮಾಗಳನ್ನು ನಾನು ನೋಡಿದ್ದೇನೆ. ಅವರ ಸಿನಿ ಪಯಣ ಪರಿಶ್ರಮ ಮತ್ತು ಪ್ರಯತ್ನಗಳಿಂದ ಕೂಡಿದೆ. ಅವರು ಕೂಡ ನಮ್ಮಂತೆಯೇ. ನಾವು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಮಧ್ಯಮ ವರ್ಗದ ಜನರು ಆದರೆ, ನಾವು ಸಿನಿಮಾ ಇಂಡಸ್ಟ್ರಿಗೆ ಬರಲು ಬಯಸಿ, ಅದನ್ನೇ ಇದೀಗ ದೊಡ್ಡದನ್ನಾಗಿ ಮಾಡಿಕೊಂಡೆವು ಎಂದರು.

ಸಿದ್ದಿಖಿ ಅವರು ರಂಗಕರ್ಮಿ ಹಿನ್ನೆಲೆಯುಳ್ಳವರು. ಒಂದು ಬಿಗ್​ ಬ್ರೇಕ್​ ಸಿಗುವವರೆಗೂ ಅನೇಕ ಪಾತ್ರಗಳನ್ನು ಅವರು ನಿಭಾಯಿಸಿದ್ದಾರೆ. ನಾನು ಕೂಡ ಅಷ್ಟೇ ಒಂದು ದೊಡ್ಡ ಬ್ರೇಕ್​ ಸಿಗುವವರೆಗೂ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ. ಸಿದ್ದಿಖಿ ಅವರು ನಮಗಿತಂಲೂ ಹಿರಿಯರು. ನಾವು ಒಂದೇ ಪ್ರಯಾಣದಲ್ಲಿದ್ದೇವೆ ಎಂದು ಸಿದ್ದಿಖಿ ಅವರನ್ನು ಮನಸಾರೆ ಹೊಗಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!